Advertisement

ಕೋವಿಡ್ ರೋಗಿಗಳ ಶುಶ್ರೂಷೆಗೆ ಉಚಿತ ಭವನ ನೀಡಿದ ಕಾಶೀ ಪೀಠ

06:02 PM May 04, 2021 | Team Udayavani |

ಸೊಲ್ಲಾಪುರ: ಜಿಲ್ಲೆಯ ಮಂಗಳವೇಡಾದಲ್ಲಿರುವ ಕಾಶಿ ವಿಶ್ವೇಶ್ವರ ಸಾಂಸ್ಕೃತಿಕ ಭವನವನ್ನು ಕೊರೊನಾ ರೋಗಿಗಳಿಗೆ ಬಳಸಿಕೊಳ್ಳಲು ಕಾಶಿ ಮಹಾ ಪೀಠವು ಉಚಿತವಾಗಿ ನೀಡಿದೆ.

Advertisement

ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಲೋಕಕಲ್ಯಾಣ ಕಾರ್ಯಕ್ರಮಗಳಿಗೆಂದೇ ಶ್ರೀ ಪೀಠದಿಂದ ನಿರ್ಮಿಸಿದ ಈ ಭವನವನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ಹೆಚ್ಚಳವಾದಾಗ ಸೊಲ್ಲಾಪುರ ಸಂಸದ ಡಾ| ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಸೂಚನೆ, ಸೊಲ್ಲಾಪುರ ಜಿಲ್ಲಾ ಧಿಕಾರಿ ಮಿಲಿಂದ ಶಂಬರಕರ ಅವರ ಅಪೇಕ್ಷೆ ಮೇರೆಗೆ ಏಳು ತಿಂಗಳವರೆಗೆ ಭವನದ ಎಲ್ಲ ಪರಿಸರವನ್ನು ಕೊರೊನಾ ರೋಗಿಗಳ ಶುಶ್ರೂಷೆಗಾಗಿ ಉಚಿತವಾಗಿ ಕೊಡಲಾಗಿತ್ತು.

ಈ ವರ್ಷವೂ ಸೊಲ್ಲಾಪುರ ಜಿಲ್ಲಾ ಧಿಕಾರಿಗಳ ಅಪೇಕ್ಷೆ ಮೇರೆಗೆ ಕಾಶಿ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕೊರೊನಾ ರೋಗಿಗಳ ಶುಶ್ರೂಷೆಗಾಗಿ ಏ. 21ರಿಂದ ಈ ಭವನವನ್ನು ಉಚಿತವಾಗಿ ಕೊಡ ಮಾಡಿದ್ದಾರೆ. ಈ ಭವನವು 10,000 ಚದರಡಿ ಇದ್ದು 4000 ಚದುರಡಿಯಲ್ಲಿ ಊಟದ ಕೊಠಡಿ ಇದೆ. ಉಳಿದಿದ್ದೆಲ್ಲ ಓಪನ್‌ ಜಾಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next