Advertisement

ಕೋವಿಡ್ 19 ಲಕ್ಷಣ ಕಂಡು ಬಂದ ವ್ಯಕ್ತಿ ಆಸ್ಪತ್ರೆಗೆ

05:24 PM Apr 15, 2020 | Suhan S |

ಕೆ.ಆರ್‌.ಪೇಟೆ: ತಾಲೂಕಿನ ಅಕ್ಕಿಮಂಚನಹಳ್ಳಿ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಲಕ್ಷಣ ಕಂಡು ಬಂದು, ಮೈಸೂರಿನ ಆಸ್ಪತ್ರೆಗೆ ರವಾನಿಸಿರುವ ಘಟನೆಯಿಂದ ತಾಲೂಕಿನ ಜನತೆಯಲ್ಲಿ ಆತಂಕ ಉಂಟಾಗಿದೆ. ಮೈಸೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಚೆಕ್‌ಪೂಸ್ಟ್‌ ಮೂಲಕ ಬರದೆ ಹಳ್ಳಿಗಳನ್ನು ಸುತ್ತಿ ಬಳಸಿಕೊಂಡು ಅಧಿಕಾರಿಗಳ ಕಣ್ತಪ್ಪಿಸಿ ಗ್ರಾಮ ಸೇರಿಕೊಂಡಿದ್ದನು. ಆತನಿಗೆ ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿದ್ದರೂ ಗ್ರಾಮಸ್ಥರೊಂದಿಗೆ ಇಸ್ಪೀಟ್‌ ಆಡಿದ್ದನು. ಆತನ ಆರೋಗ್ಯ ಸಮಸ್ಯೆ ಕಂಡ ಗ್ರಾಮಸ್ಥರೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Advertisement

ಮಾಹಿತಿ ಪಡೆದ ತಕ್ಷಣ ತಹಶೀಲ್ದಾರ್‌ ಶಿವಮೂರ್ತಿ, ಆರೋಗ್ಯಾಧಿಕಾರಿ ಹರೀಶ್‌, ಎಸ್‌ಐ ಬ್ಯಾಟರಾಯಗೌಡ ಗ್ರಾಮಕ್ಕೆ ತೆರಳಿ ವ್ಯಕ್ತಿಯನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಿ ಆತನ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next