Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆ ಈ ನಿರ್ಧಾರ ಕೈಗೊಂಡಿದೆ. ಜಿಲ್ಲಾಧಿಕಾರಿ ಡಾ|ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ರೋಗ ಹರಡುವಿಕೆಯನ್ನು ವೈಜ್ಞಾನಿಕ ರೀತಿಯಲ್ಲಿ ತಡೆಯಲು ಅಗತ್ಯವಿರುವ ಎಲ್ಲ ಸಜ್ಜೀಕರಣ ನಡೆಸಲಾಗುವುದು. ಎಲ್ಲ ವಲಯಗಳಲ್ಲಿರುವವರು ಈಗಾಗಲೇ ತಿಳಿಸಲಾದ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದೇಶ ಗಳಿಂದ ಊರಿಗೆ ಮರಳಿದವರು ಜಿಲ್ಲಾ ಕೊರೊನಾ ನಿಯಂತ್ರಣ ಘಟಕವನ್ನು ಆಯಾ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಟುಂಬ ಆರೋಗ್ಯ ಕೇಂದ್ರ, ಸರಕಾರಿ ಆಸ್ಪತ್ರೆಯಲ್ಲಿರುವ ಸಹಾಯ ಕೇಂದ್ರವನ್ನು ಸಂಪರ್ಕಿಸಬೇಕು. ಜನತೆಯಲ್ಲಿ ಮೂಡಿರುವ ಆತಂಕ ನಿವಾರಣೆ ಉದ್ದೇಶದಿಂದ ರಚಿಸಲಾದ ಜನಜಾಗೃತಿ ಸಮಿತಿಗಳನ್ನು ಮತ್ತಷ್ಟು ಚುರುಕುಗೊಳಿ ಸಲಾಗುವುದು ಎಂದು ಸಭೆ ತಿಳಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್. ಸಾಬು, ಹೆಚ್ಚುವರಿ ದಂಡನಾಧಿಕಾರಿ ಎನ್. ದೇವಿದಾಸ್, ಉಪ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಡಿ.ವೈ.ಎಸ್. ಪಿ. ಪಿ.ಬಾಲಕೃಷ್ಣನ್, ಜಿಲ್ಲಾ ವೈದ್ಯಾಧಿಕಾರಿ ಡಾ| ಎಂ.ವಿ. ರಾಮದಾಸ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ| ಮನೋಜ್ ಎ.ಟಿ. ಮುಂತಾದವರು ಉಪಸ್ಥಿತರಿದ್ದರು.
Related Articles
ದೂ.ಸಂಖ್ಯೆ: 9946000493
ಕೊರೊನಾ ಹಾವಳಿ ತಲೆದೋರಿರುವ ಪ್ರದೇಶಗಳಿಂದ ಮತ್ತು ವಿದೇಶಗಳಿಂದ ಊರಿಗೆ ಮರಳಿದ ಮಂದಿ ಜಿಲ್ಲಾ ಕೊರೊನಾ ಘಟಕ ದೂರವಾಣಿ ಸಂಖ್ಯೆ: 9946000493ಕ್ಕೆ ಮಾಹಿತಿ ನೀಡಬೇಕು. ರೋಗ ಹರಡುವಿಕೆ ತಡೆಯುವ ಅಂಗವಾಗಿ ರೋಗ ಲಕ್ಷಣ ಕಂಡು ಬಂದಲ್ಲಿ ಘಟಕಕ್ಕೆ ಮಾಹಿತಿ ನೀಡಿದ ನಂತರವಷ್ಟೇ ಆಸ್ಪತ್ರೆಗೆ ತೆರಳಬೇಕು. ಯಾವ ಕಾರಣಕ್ಕೂ ನಿಗಾ ಅವಧಿಯಲ್ಲಿ ಕೌಟುಂಬಿಕ ಸಮಾರಂಭಗಳಲ್ಲಿ, ಇನ್ನಿತರ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಕೂಡದು.
Advertisement