Advertisement

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

10:53 AM Oct 17, 2024 | Team Udayavani |

ಬೆಂಗಳೂರು: ಹಿಜಾಬ್‌ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿದ ಆರೋಪದಡಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ನಟ ಚೇತನ್‌ ಕುಮಾರ್‌ (ಚೇತನ್‌ ಅಹಿಂಸಾ) ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್‌ ಹೈಕೋರ್ಟ್‌ ಹಿಂಪಡೆದಿದೆ.

Advertisement

ನಟ ಚೇತನ್‌ ಕುಮಾರ್‌ ಅಹಿಂಸಾ ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ತೌಹೀದ್‌ ಜಮಾತ್‌ ಅಧ್ಯಕ್ಷ ಆರ್‌. ರಹಮತುಲ್ಲಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಗಿರೀಶ್‌ ಭಾರದ್ವಾಜ್‌ ದಾಖಲಿಸಿರುವ ಕ್ರಿಮಿನಲ್‌ ನ್ಯಾಯಾಂಗ ನಿಂದನಾ ಅರ್ಜಿಯ ವಿಚಾರಣೆ ಯನ್ನು ನ್ಯಾಯಮೂರ್ತಿ ಕೆ ಸೋಮ ಶೇಖರ್‌ ಹಾಗೂ ನ್ಯಾ. ಕೆ. ರಾಜೇಶ್‌ ರೈ ಅವರಿದ್ದ ವಿಭಾ ಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿ

ಚಾರಣೆ ವೇಳೆ ಖುದ್ದು ಹಾಜರಿದ್ದ ಚೇತನ್‌ ಪರ ವಕೀಲ ಜೆ.ಡಿ.ಕಾಶಿನಾಥ್‌, ಅರ್ಜಿದಾರ ಚೇತನ್‌ ವಿರುದ್ಧ 2024ರ ಸೆಪ್ಟೆಂಬರ್‌ 14ರಂದು ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ವಾರಂಟ್‌ ಹಿಂಪಡೆಯಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಈ ಮನವಿಯನ್ನು ಪುರಸ್ಕರಿಸಿದ ನ್ಯಾಯ ಪೀಠ, ಜಾಮೀನು ರಹಿತ ಬಂಧನದ ವಾರಂಟ್‌ ಹಿಂಪ ಡೆದ ನ್ಯಾಯಪೀಠ, ಅದಕ್ಕಾಗಿ ನಟ ಚೇತನ್‌ಗೆ 5 ಸಾವಿರ ರೂ. ದಂಡ ವಿಧಿಸಿ ಅದನ್ನು ಹೈಕೋರ್ಟ್‌ ಗ್ರಂಥಾ ಲಯಕ್ಕೆ ಪಾವತಿಸಬೇಕು ಎಂದು ನಿರ್ದೇಶನ ನೀಡಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next