Advertisement
2016ರಲ್ಲಿ ಯೋಗೀಶಗೌಡರ ಹತ್ಯೆ ನಡೆದಾಗ ಸಲ್ಲಿಸಲಾಗಿರುವ ದೂರಿನಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ದೂರು ಸಲ್ಲಿಕೆಯಾಗಿಲ್ಲ. ಅಲ್ಲದೇ ಪ್ರಕರಣದಲ್ಲಿ ಅರ್ಜಿದಾರರ ಕೈವಾಡ ಇದೆ ಎನ್ನಲು ಯಾವುದೇ ನಿರ್ದಿಷ್ಟ ದಾಖಲೆಗಳು ಇಲ್ಲ. ಕೇವಲ ಸಂಚು (120ಬಿ) ಇದೆ ಎಂಬ ಹೇಳಿಕೆಯ ಮೇಲೆ ವಿನಯ ಕುಲಕರ್ಣಿ ಅವರನ್ನು ಬಂಧಿಸಲಾಗಿದೆ. ಇದಲ್ಲದೇ ಹತ್ಯೆಯ ದೂರು ದಾಖಲಿಸಿ, ಹಲವು ವರ್ಷಗಳಿಂದ ಯಾವುದೇ ಆರೋಪ ಮಾಡದ ದೂರುದಾರರು ಈಗ ಅರ್ಜಿದಾರರ ಬಗ್ಗೆ ಆರೋಪ ಮಾಡುತ್ತಿರುವುದು ದುರುದ್ದೇಶದಿಂದ ಕೂಡಿದೆ. ಹೀಗಾಗಿ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ವಿನಯ್ ಪರ ವಕೀಲರು ನ್ಯಾಯಾಲಯದ ಎದುರು ವಾದ ಮಂಡಿಸಿದರು.
Related Articles
Advertisement