Advertisement

ಎಟಿಎಂ ಕೊಠಡಿಗೆ ಹಾನಿ: ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

12:45 PM Sep 18, 2022 | Team Udayavani |

ಮಂಗಳೂರು: ಬೋಳೂರು ಗ್ರಾಮದ ಮಠದಕಣಿ ಕೆನರಾ ಬ್ಯಾಂಕ್‌ ಕಟ್ಟಡದ ಎಟಿಎಂ ಕೋಣೆಯ ಬಾಗಿಲಿನ ಗಾಜಿಗೆ ಕಲ್ಲು ಎಸೆದು ಜಖಂಗೊಳಿಸಿದ್ದ ಆರೋಪಿ ಮಠದಕಣಿ ರಸ್ತೆಯ ನಿವಾಸಿ ಮನೀಶ್‌(20)ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Advertisement

2020ರ ಜು. 9ರಂದು ಬೆಳಗ್ಗೆ 10.45ಕ್ಕೆ ಆರೋಪಿ ಎಟಿಎಂ ಕೋಣೆಯ ಬಾಗಿಲಿನ ಗಾಜಿಗೆ ಕಲ್ಲು ಎಸೆದು ಹಾನಿಗೊಳಿಸಿ 3,540 ರೂ. ನಷ್ಟವನ್ನುಂಟು ಮಾಡಿದ್ದ. ಈ ಬಗ್ಗೆ ಬರ್ಕೆ ಪೊಲೀಸ್‌ ಉಪನಿರೀಕ್ಷಕ ಹಾರುನ್‌ ಅಖ್ತರ್‌ ತನಿಖೆ ನಡೆಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾಶ್ರೀ ಎಚ್‌.ಎಸ್‌. ಅವರು ಆರೋಪಿ ಮನೀಶ್‌ ತಪ್ಪಿತಸ್ಥನೆಂದು ನಿರ್ಣಯಿಸಿ ಭಾ.ದಂ.ಸಂ. ಕಲಂ 427ರ ಅಡಿಯಲ್ಲಿ 3,500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 10 ದಿನಗಳ ಸಾಮಾನ್ಯ ಸೆರೆಮನೆ ವಾಸ, ಕಲಂ 2(ಎ) ಕೆಪಿಡಿಎಲ್‌ಪಿ ಕಾಯ್ದೆಯಡಿಯ ಅಪರಾಧಕ್ಕಾಗಿ 8 ತಿಂಗಳು ಸಾಮಾನ್ಯ ಸಜೆ ಮತ್ತು 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 10 ದಿನಗಳ ಸಾಮಾನ್ಯ ಸೆರೆಮನೆ ವಾಸ ವಿಧಿಸಿ ಆದೇಶಿಸಿದ್ದಾರೆ.

ಸರಕಾರದ ಪರವಾಗಿ ಪ್ರಭಾರ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್‌ ಕುಮಾರ್‌ ಬಿ. ಅವರು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next