Advertisement

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ

02:12 AM Oct 05, 2024 | Team Udayavani |

ಹೊಸದಿಲ್ಲಿ: ಖನಿಜಗಳ ಮೇಲೆ ತೆರಿಗೆ ವಿಧಿಸುವ ಶಾಸನಾತ್ಮಕ ಅಧಿಕಾರ ರಾಜ್ಯಗಳಿಗೆ ನೀಡಲಾದ ತೀರ್ಪು ಪುನರ್‌ ಪರಿಶೀಲನ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಳ್ಳಿ ಹಾಕಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ ಜುಲೈ 25ರಂದು ತೀರ್ಪು ನೀಡಿತ್ತು.

Advertisement

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ 8 ಜಡ್ಜ್ ಪೀಠವು, ಪುನರ್‌ ಪರಿಶೀಲನ ಅರ್ಜಿಗಳನ್ನು ಪರಿಶೀ ಲಿಸಿ, ಯಾವುದೇ ವಿಚಾರಣೆ ಯೋಗ್ಯ ಅಂಶಗಳಿಲ್ಲ ಎಂದು ವಜಾ ಮಾಡಿತು. ಜುಲೈ 25ರಂದು ನೀಡಿದ್ದ ತೀರ್ಪಿನಲ್ಲಿ ಯಾವುದೇ ತಪ್ಪುಗಳಿಲ್ಲ ಎಂದು ಪೀಠವು ಹೇಳಿದೆ. ಈ ಹಿಂದೆ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್‌ ನ್ಯಾ| ಬಿ.ವಿ.ನಾಗರತ್ನಾ ಅವರು ಮಾತ್ರ ಭಿನ್ನ ತೀರ್ಪು ನೀಡಿ, ಖನಿಜಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಕೇಂದ್ರಕ್ಕೆ ಮಾತ್ರವೇ ಇದೆ ಎಂದು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next