Advertisement

ಚಂದಾ ಕೊಚ್ಚಾರ್‌ ಮೈದುನನ ಲುಕ್‌ ಔಟ್‌ ನೊಟೀಸ್‌ ಹಿಂಪಡೆಯಲು ಕೋರ್ಟ್‌ ಸೂಚನೆ

10:33 AM Jun 08, 2019 | Team Udayavani |

ಹೊಸದಿಲ್ಲಿ : ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಓ ಚಂದಾ ಕೊಚ್ಚಾರ್‌ ಅವರ ಮೈದುನ ರಾಜೀವ್‌ ಕೊಚ್ಚಾರ್‌ ವಿರುದ್ಧ ಬ್ಯಾಂಕ್‌ ಲೋನ್‌ ಫ್ರಾಡ್‌ ಗೆ ಸಂಬಂಧಿಸಿ ಹೊರಡಿಸಲಾಗಿದ್ದ  Look out circular (ಎಲ್‌ಓಸಿ) ಹಿಂಪಡೆಯುವಂತೆ ಸಂಬಂಧಿತ ಅಧಿಕಾರಿಗಳಿಗೆ ದಿಲ್ಲಿ ನ್ಯಾಯಾಲಯ ಇಂದು ಶುಕ್ರವಾರ ನಿರ್ದೇಶ ನೀಡಿದೆ.

Advertisement

ವಿಶೇಷ ನ್ಯಾಯಾಧೀಶೆ ಅಂಜು ಬಜಾಜ್‌ ಚಂದನಾ ಅವರು ಅನಿವಾಸಿ ಭಾರತೀಯ ರಾಜೀವ್‌ ಗೆ ತಾನು ಪ್ರಕೃತ ವಾಸವಾಗಿರುವ ಸಿಂಗಾಪುರಕ್ಕೆ ಮರಳಲು ಅನುಮತಿ ನೀಡಿದರು.

ಹಾಗಿದ್ದರೂ ಜಾರಿ ನಿರ್ದೇಶನಾಲಯದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಿತೀಶ್‌ ರಾಣಾ ಅವರ ವಾದವನ್ನು ಮನ್ನಿಸಿದ ನ್ಯಾಯಾಲಯ ಆರೋಪಿಗೆ ಅನೇಕ ಶರತ್ತುಗಳನ್ನು ವಿಧಿಸಿತು.

ಆರೋಪಿ ರಾಜೀವ್‌ ವಿದೇಶಕ್ಕೆ ತೆರಳುವ ಮುನ್ನ ಜಾರಿ ನಿರ್ದೇಶನಾಲಯಕ್ಕೆ ತನ್ನ ಪ್ರವಾಸ ವೇಳಾಪಟ್ಟಿ, ಸಿಂಗಾಪುರದಲ್ಲಿನ ತನ್ನ ವಿಳಾಸ, ಸಂಪರ್ಕ ಟೆಲಿಫೋನ್‌ ನಂಬ್ರ ಮತ್ತು ಇ-ಮೇಲ್‌ ಇತ್ಯಾದಿಗಳನ್ನು ನೀಡಬೇಕಲ್ಲದೆ ಸಿಂಗಾಪುರದಿಂದ ಹೊರಗೆ ಪ್ರಯಾಣಿಸುವ ಸಂದರ್ಭದಲ್ಲಿ ಇಡಿ ಗೆ ಮಾಹಿತಿ ನೀಡಬೇಕು ಎಂದು ಕೋರ್ಟ್‌ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next