Advertisement

ನಕಲಿ ಆರ್‌ಟಿಪಿಸಿಆರ್‌ ದಾಖಲೆ ಹೊಂದಿದ್ದ ದಂಪತಿ  ವಶ

01:11 AM Aug 14, 2021 | Team Udayavani |

ಮಡಿಕೇರಿ: ನಕಲಿ ಆರ್‌ಟಿಪಿಸಿಆರ್‌ ವರದಿಯೊಂದಿಗೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ಕೇರಳದ ದಂಪತಿಯನ್ನು ಕಾರು ಸಹಿತ ಪೊಲೀಸರು ವಶಕ್ಕೆ ಪಡೆದ ಪ್ರಕರಣ ವಿರಾಜಪೇಟೆ ಹೊರವಲಯದ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.

Advertisement

ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಉದ್ಯಾವರ ನಿವಾಸಿ ಸೈಯದ್‌ ಮೊಹಮ್ಮದ್‌(32) ಮತ್ತು ಪತ್ನಿ ಅಯಿಷತ್‌ ರೆಹಮಾನ್‌ ಬಿ.ಎಂ. ವಿರುದ್ಧ ನಕಲಿ ದಾಖಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಪಾಸಣೆ ಕೇಂದ್ರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ಕೋವಿಡ್‌ ನೆಗೆಟಿವ್‌ ವರದಿಯನ್ನು ಪರಿಶೀಲನೆಗೆ ಒಳಪಡಿಸಿದರು. ವರದಿಯಲ್ಲಿ ಹೆಸರು ಸೈಯದ್‌ ಮೊಹಮ್ಮದ್‌, ಪತ್ನಿ ಅಯಿಷತ್‌ ರೆಹಮಾನ್‌ ಬಿ.ಎಂ. ಎಂದು ನಮೂದಾಗಿದೆ. ಈ ವರದಿಯನ್ನು ಕ್ಯುಆರ್‌ ಬಾರ್‌ ಕೋಡ್‌ ಸ್ಕ್ಯಾನ್‌ ಮಾಡಿದಾಗ ಸ್ಕ್ಯಾನ್‌ ರಿಪೋರ್ಟ್‌ನಲ್ಲಿ ಸಫ‌ುìದ್ದೀನ್‌ ಎಂಬ ಹೆಸರು ನಮೂದಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದಂಪತಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಆತ ತಪ್ಪನ್ನು ಒಪ್ಪಿ ಕೊಂಡಿದ್ದಾನೆ. ಪತ್ನಿಯ ತವರೂರು ಎಮ್ಮೆಮಾಡು ಗ್ರಾಮಕ್ಕೆ ಬರಬೇಕಿದ್ದ ಕಾರಣ ಮಂಜೇಶ್ವರದಲ್ಲಿ ನಕಲಿ ಆರ್‌ಟಿಪಿಸಿಆರ್‌ ವರದಿ ಪಡೆದು ಸಂಪಾಜೆ, ಮಾರ್ಗವಾಗಿ ಎಮ್ಮೆಮಾಡುವಿಗೆ ಬಂದಿರುವುದಾಗಿ ಆತ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next