Advertisement

ಯುವಸಮೂಹದ ಮೇಲಿದೆ ದೇಶದ ಜವಾಬ್ದಾರಿ: ನ್ಯಾ|ನಾಗೇಶ್‌

06:45 PM Oct 20, 2021 | Team Udayavani |

ಕೂಡ್ಲಿಗಿ: ದೇಶ ಕಟ್ಟುವ ಜವಾಬ್ದಾರಿ ಯುವ ಜನರ ಮೇಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾ ಧೀಶರಾದ ಕೆ.ನಾಗೇಶ ಹೇಳಿದರು.

Advertisement

ಪಟ್ಟಣದ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ಭಾರತದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಪುರುಷ ಪ್ರಧಾನದ ಸಮಾಜದಲ್ಲಿ
ಮಹಿಳೆಯರಂತೆ ಭಾವನಾತ್ಮಕ ಇರುವ ಮಂಗಳಮುಖಿಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢವಾಗಲು ವಿವಿಧ ಇಲಾಖೆಯ ಕಾರ್ಯಕ್ರಮ ಯೋಜನೆಯ ಪರಿಕಲ್ಪನೆ ಮೂಡಿಸಬೇಕಾಗಿದೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಅವರ ಬದುಕು ದುಸ್ತರವಾಗಿದ್ದು, ಸಾಮಾಜಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕಾಗಿದೆ. ಅವರಿಗೂ ಬದುಕುವ ಹಕ್ಕು, ಮತದಾನದ ಅವಕಾಶ ನೀಡಿದೆ. ನಮ್ಮ ಸಂವಿಧಾನದಲ್ಲಿ ಅದೇ ರೀತಿಯಾಗಿ ಸುಗಮ ಮಂಗಳಮುಖೀಯವರು ಸಹ ಜೀವನಕ್ಕೆ ಸರ್ಕಾರದ ವಿವಿಧ ಇಲಾಖೆ ಮೂಲಕ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಅವರು ಸದೃಢರಾಗಬೇಕಾಗಿದೆ. ಮುಖ್ಯವಾಹಿನಿಯಲ್ಲಿ ಬರಬೇಕಾಗಿದೆ ಎಂದು ತಿಳಿಸಿದರು.

ಬೆಳವಣಿಗೆ ಪೂರಕ ಪ್ರೋತ್ಸಾಹ ಸಂಪದ್ಭರಿತ ಮತ್ತು ಸಾಮರಸ್ಯ ಪರಿಕಲ್ಪನೆಯೊಂದಿಗೆ ಜೀವನ ಮಾಡಲು ಸೂಚಿಸಿದರು. ಪ್ರತಿ ವರ್ಷವು ಭಾರತೀಯರು ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಾರೆ. ಈ ದಿನವು ಭಾರತೀಯರಿಗೆ ಬ್ರಿಟಿಷರಿಂದ ಮುಕ್ತಿ ಸಿಕ್ಕ ದಿನ.
ಭಾರತೀಯರೆಲ್ಲರೂ ಬ್ರಿಟಿಷರ ಸರ್ವಾಧಿಕಾರಿ ನಿಯಮಗಳಿಂದ ಸ್ವತಂತ್ರಗೊಂಡ ದಿನ. ಇಂದು ನಾವು 75ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಈ ವರ್ಷ ಭಾನುವಾರದಂದು ನಮ್ಮ ದೇಶ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡುತ್ತಿದೆ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ
ಇರುತ್ತದೋ, ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ
ಎಂಬುದು ಇಲ್ಲ. ಅದಕ್ಕೆ ಇಂದಿನ ಭಾರತವೇ ಸಾಕ್ಷಿಯಾಗಿದೆ ಎಂದರು.

ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ಮಾತನಾಡಿ, ಯುವಜನರು ಸ್ವಾತಂತ್ರ್ಯ ಹೋರಾಟದ ಮಹತ್ವ ಅರಿಯಬೇಕು. ಹಿಂದೆ ಹೋರಾಟಗಾರರೂ ಹೋರಾಟದಲ್ಲಿ ಜೈಲು ಸೇರಿದ್ದರು. ಆ ತ್ಯಾಗ ಜೀವನದ ಫಲವಾಗಿಯೇ ಸ್ವಾತಂತ್ರ್ಯ ದೊರಕಿದೆ ಎಂಬುದನ್ನು ಯುವಜನ ಮರೆಯಬಾರದು ಎಂದರು. ಗಾಂಧಿಧೀಜಿಯವರ ಅಹಿಂಸೆ, ಸತ್ಯ ಮಾರ್ಗದಲ್ಲಿ ಯುವಜನ ಮುನ್ನಡೆಯಬೇಕು.

Advertisement

ಯಾವುದೇ ಕೆಲಸಕ್ಕೂ ಮುನ್ನ ಸೋಲಿಗೆ ಅಂಜದೆ ಸಾಧಿಸುವ ಪ್ರಯತ್ನ ಮಾಡಬೇಕು ಎಂದರು. ಈ ಸಮಯದಲ್ಲಿ ತಹಶೀಲ್ದಾರ್‌ರು ಮತ್ತು ಇಒ ಜಿ.ಎಂ. ಬಸಣ್ಣ, ಸಿಡಿಪಿಒ ನಾಗನಗೌಡ, ವಕೀಲರಾದ ಶೈಲಜಾ, ವಕೀಲರ ಸಂಘದ ಕಾರ್ಯದರ್ಶಿ ಕಾನೂನು ಸೇವಾ ಸಮಿತಿ (ವಕೀಲರು) ಸದಸ್ಯರು, ವೀರಣ್ಣ ಸಿಪಿಐ ಕಾರ್ಯದರ್ಶಿ ಸದರಿ ಕಾರ್ಯಕ್ರಮದಲ್ಲಿ 50 ಮಂಗಳಮುಖಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next