Advertisement
ಬಿಜೆಪಿಯಿಂದ ಬೆಳ್ತಂಗಡಿಯ ಹಿರಿಯ ನಾಯಕ ಪ್ರತಾಪಸಿಂಹ ನಾಯಕ್, ಎಂ.ಟಿ.ಬಿ. ನಾಗರಾಜ್, ಸುನಿಲ್ ವಲ್ಯಾಪುರೆ, ಆರ್. ಶಂಕರ್, ಕಾಂಗ್ರೆಸ್ನಿಂದ ಬಿ.ಕೆ. ಹರಿಪ್ರಸಾದ್, ನಸೀರ್ ಅಹಮದ್ ಹಾಗೂ ಜೆಡಿಎಸ್ನಿಂದ ಗೋವಿಂದರಾಜು ನಾಮಪತ್ರ ಸಲ್ಲಿಸಿದರು.
Related Articles
Advertisement
ಮುಖ್ಯಮಂತ್ರಿ ಗೈರುಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸಿಎಂ ಯಡಿಯೂರಪ್ಪ ಗೈರಾಗಿದ್ದರು. ಕಾಲು ನೋವಿನ ಕಾರಣ ವಿಶ್ರಾಂತಿಯಲ್ಲಿದ್ದರು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ. ಜೂ. 22ಕ್ಕೆ ಅಧಿಕೃತ ಘೋಷಣೆ
ಪಕ್ಷೇತರ ಅಭ್ಯರ್ಥಿಯಾಗಿ ಯಡವನಹಳ್ಳಿ ಪಿ.ಸಿ. ಕೃಷ್ಣೇಗೌಡ ಎಂಬವರು ನಾಮಪತ್ರ ಸಲ್ಲಿ ಸಿದ್ದರಾದರೂ ಸೂಚಕರ ಸಹಿ ಇಲ್ಲ ಎನ್ನಲಾಗಿದೆ. ಶುಕ್ರವಾರ ನಾಮ ಪತ್ರಪರಿಶೀಲನೆ ನಡೆಯಲಿದ್ದು, 3 ಪಕ್ಷಗಳ ಏಳೂ ಮಂದಿ ಬಹುತೇಕ ಅವಿರೋಧ ಆಯ್ಕೆಯಾಗಬಹುದು. ನಾಮಪತ್ರ ವಾಪಸಾತಿಗೆ ಜೂ.22 ಕೊನೆಯ ದಿನಾಂಕ, ಅಂದು ಅಧಿಕೃತ ಘೋಷಣೆಯಾಗಬಹುದು ಎನ್ನಲಾಗಿದೆ. ಬೆಂಬಲಿಗರ ಜಮಾವಣೆ
ನಾಮಪತ್ರ ಸಲ್ಲಿಕೆ ವೇಳೆ ಐವರಿಗೆ ಮಾತ್ರ ಪ್ರವೇಶವಿದ್ದ ಕಾರಣ ಅಭ್ಯರ್ಥಿಗಳ ಜತೆ ಬಂದಿದ್ದ ಬೆಂಬಲಿಗರು ವಿಧಾನಸೌಧ ಕಾರಿಡಾರ್ನಲ್ಲಿ ಜಮಾವಣೆಗೊಂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಅವರನ್ನು ನಿಯಂತ್ರಿಸಲು ಸ್ಪೀಕರ್ ಕಚೇರಿ ಸಿಬಂದಿ ಮತ್ತು ಪೊಲೀಸರು ಸಾಕಷ್ಟು ಶ್ರಮಿಸಬೇಕಾಯಿತು. ಬಿ.ಕೆ. ಹರಿಪ್ರಸಾದ್, ನಸೀರ್ ಅಹಮದ್ ವಿದ್ಯಾರ್ಥಿ ನಾಯಕರಿಂದ ರಾಷ್ಟ್ರಮಟ್ಟದ ವರೆಗೆ ಬೆಳೆದವರು. ಅವರ ಹಿರಿತನ ಮತ್ತು ಮಾರ್ಗದರ್ಶನದಿಂದ ಪಕ್ಷಕ್ಕೆ ಶಕ್ತಿ ತುಂಬಲು ನಾವೆಲ್ಲ ಅವರನ್ನು ವಿಧಾನಪರಿಷತ್ಗೆ ಕಳುಹಿಸಲು ತೀರ್ಮಾನಿಸಿದ್ದೇವೆ.
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಪರಿಷತ್ನಲ್ಲಿ ತೆರವಾದ ಸ್ಥಾನಗಳಿಗೆ ಬಿಜೆಪಿ ನಾಲ್ಕು ಮಂದಿಗೆ ಅವಕಾಶ ಕಲ್ಪಿಸಿದೆ. ಸಿದ್ಧಾಂತದ ಮೂಲಕ ಕಾರ್ಯಕರ್ತರನ್ನು ಬೆಳೆಸಿದ ಪ್ರತಾಪ ಸಿಂಹ ನಾಯಕ್ ಮತ್ತು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣ ವಾದವರಿಗೂ ಅವಕಾಶ ನೀಡಲಾಗಿದೆ.
-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ ಜೆಡಿಎಸ್ನಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟಿದ್ದೇವೆ. ಪಕ್ಷ ನಿಷ್ಠೆ, ಸಂಘಟನ ಸಾಮರ್ಥ್ಯ ನೋಡಿ ಗುರುತಿಸಲಾಗಿದೆ.
– ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ