Advertisement

ಉಪ್ಪೂರು: ಲಾರಿಯಲಿದ್ದ ಹತ್ತಿ ಬೆಂಕಿಗೆ ಆಹುತಿ

07:35 AM Aug 31, 2017 | Team Udayavani |

ಬ್ರಹ್ಮಾವರ: ಉಪ್ಪೂರು ಸಾಲ್ಮರ ಬಳಿ ಬುಧವಾರ ಬೆಳಗ್ಗೆ ಲಾರಿಯಲ್ಲಿದ್ದ ಹತ್ತಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

Advertisement

ಸಾಲ್ಮರ ಬಳಿ ಹಾಸಿಗೆ ತಯಾರಿಕಾ ಘಟಕಕ್ಕೆ ಹಾಸನದಿಂದ ಹತ್ತಿಯನ್ನು ತರಿಸಲಾಗಿತ್ತು. ಹತ್ತಿ ತುಂಬಿದ ಲಾರಿ ಸಾಲ್ಮರ ಸಮೀಪ ಆಗಮಿಸುತ್ತಿದ್ದಾಗ ವಿದ್ಯುತ್‌ ವಯರ್‌ ತಗುಲಿ ಬೆಂಕಿ ಹತ್ತಿಕೊಂಡಿತು.

ಘಟನೆಯಲ್ಲಿ ಹತ್ತಿ ಪೂರ್ಣ ಸುಟ್ಟು ಹೋಗಿದ್ದು, ಲಾರಿಗೆ ಹಾನಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಲಾರಿಗೆ ಬೆಂಕಿ ಹಚ್ಚಿಕೊಂಡಿದ್ದರಿಂದ ಈ ರಸ್ತೆಯಲ್ಲಿ ಕೆಲವು ಸಮಯ ವಾಹನ ಸಂಚಾರ ಸ್ಥಗಿತಗೊಂಡಿತು.

ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ.  ಬ್ರಹ್ಮಾವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next