Advertisement

ಭ್ರಷ್ಟಾಚಾರ ಪೋಷಕ ಸರ್ಕಾರ: ಸಿದ್ದರಾಮಯ್ಯ

11:38 PM Feb 14, 2020 | Lakshmi GovindaRaj |

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ, ಅರಣ್ಯ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಆನಂದ್‌ ಸಿಂಗ್‌ಗೆ ಅರಣ್ಯ ಖಾತೆ ಕೊಡುವ ಮೂಲಕ “ಬಿಜೆಪಿ ಸರ್ಕಾರ ಭ್ರಷ್ಟಾಚಾರ ಪೋಷಕ ಸರ್ಕಾರ’ವೆಂದು ಸಾಬೀತಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ಆನಂದ್‌ ಸಿಂಗ್‌ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಇದೆ. ಜೊತೆಗೆ ಅರಣ್ಯ ಕಾಯ್ದೆಯಡಿ ಪ್ರಕರಣ ಸಹ ಎದುರಿಸುತ್ತಿದ್ದಾರೆ.

Advertisement

ಅಂತಹವರಿಗೆ ಮಂತ್ರಿ ಸ್ಥಾನ ಕೊಟ್ಟರೆ “ಕುರಿ ಕಾಯಿ ತೋಳ ಅಂದ್ರೆ, ಸಂಬಳ ಬೇಡ ಅಂತಂತೆ’ ಎಂಬಂತಾಗುತ್ತದೆ ಎಂದು ಕುಟುಕಿದರು. ತಕ್ಷಣ ಸಂಪುಟದಿಂದ ಆನಂಗ್‌ ಸಿಂಗ್‌ರನ್ನು ಕೈಬಿಡಬೇಕು. ನೈತಿಕತೆ ಇದ್ದರೆ ಖುದ್ದಾಗಿ ಆನಂದ್‌ ಸಿಂಗ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡದಿದ್ದರೆ ಮುಖ್ಯಮಂತ್ರಿಯವರು ಖಾತೆ ಬದಲಾವಣೆ ಮಾಡಿ ಬೇರೊಬ್ಬರಿಗೆ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next