Advertisement

ಭ್ರಷ್ಟಾಚಾರ ಆರೋಪ ವಿವರ ಹಂಚಿಕೊಳ್ಳಲಾಗದು: ಪಿಎಂಓ ಸ್ಪಷ್ಟನೆ

07:22 PM Nov 21, 2018 | udayavani editorial |

ಹೊಸದಿಲ್ಲಿ: ಕೆಲವು ಕೇಂದ್ರ ಸಚಿವರ ವಿರುದ್ಧ ಬಂದಿರುವ ಭ್ರಷ್ಟಾಚಾರದ ಆರೋಪಗಳ ವಿವರಗಳನ್ನು ಹಂಚಿಕೊಳ್ಳುವುದಕ್ಕೆ ಪ್ರಧಾನಿ ಕಾರ್ಯಾಲಯ ನಿರಾಕರಿಸಿದೆ. 

Advertisement

ಇಂತಹ ವಿವರಗಳು ವಸ್ತು-ವ್ಯಕ್ತಿ ಕೇಂದ್ರಿತವಾಗಿದ್ದು ಅವುಗಳ ನಿರ್ವಹಣೆ ಸಂಕೀರ್ಣದ್ದಾಗಿರುತ್ತದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

ಸಿಬಿಐ ಹಿರಿಯ ಅಧಿಕಾರಿಯೋರ್ವರು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯದಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ. 

“ಪ್ರಧಾನಿ ಕಾರ್ಯಾಲಯ ಕಾಲಕಾಲಕ್ಕೆ  ಕೇಂದ್ರದ ಹಲವು ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರದ ದೂರುಗಳನ್ನು ಸ್ವೀಕರಿಸುತ್ತದೆ; ಅವೆಲ್ಲವುಗಳ ವಿವರಗಳನ್ನು ಹಂಚಿಕೊಳ್ಳುವುದು ಕಾರ್ಯಸಾಧುವಲ್ಲ” ಎಂದು ಪ್ರಧಾನಿ ಕಾರ್ಯಾಲಯ ಆರ್‌ಟಿಐ ಗೆ ಉತ್ತರವಾಗಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next