Advertisement

Singapore: ಭ್ರಷ್ಟಾಚಾರ ಪ್ರಕರಣ: ಭಾರತ ಮೂಲದ ಸಿಂಗಾಪುರ ಸಚಿವ ರಾಜೀನಾಮೆ

08:59 PM Jan 18, 2024 | Team Udayavani |

ಸಿಂಗಾಪುರ: ಭ್ರಷ್ಟಾಚಾರದ ಆರೋಪ ಹಿನ್ನೆಲೆಯಲ್ಲಿ ಸಿಂಗಾಪುರದ ಭಾರತೀಯ ಮೂಲದ ಸಾರಿಗೆ ಸಚಿವ ಎಸ್‌.ಈಶ್ವರನ್‌(61) ಗುರುವಾರ ಆಡಳಿತಾರೂಢ ಪೀಪಲ್ಸ್‌ ಆ್ಯಕ್ಷನ್‌ ಪಾರ್ಟಿಗೆ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಂಚ ಸ್ವೀಕಾರ ಸೇರಿದಂತೆ ಒಟ್ಟು 27 ಆರೋಪಗಳನ್ನು ಈಶ್ವರನ್‌ ಎದುರಿಸುತ್ತಿದ್ದು, ಕಳೆದ ವರ್ಷದ ಜು.11ರಂದು ಅವರನ್ನು ಬಂಧಿಸಲಾಗಿತ್ತು.

Advertisement

ಗುರುವಾರ ಅವರು ತಮ್ಮ ಹುದ್ದೆ, ಸಂಸದ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ವಿರುದ್ಧ ತನಿಖೆ ಆರಂಭವಾದ ದಿನದಿಂದ ಈವರೆಗಿನ ಎಲ್ಲ ವೇತನ ಮತ್ತು ಭತ್ಯೆಯ ಮೊತ್ತವನ್ನು ಮರಳಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next