Advertisement

ಮೋರ್ಬಿ ಸೇತುವೆ ಪ್ರಕರಣ: ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

08:55 PM Feb 20, 2023 | Team Udayavani |

ಗಾಂಧಿನಗರ : ಗುಜರಾತ್‌ನ ಮೊರ್ಬಿಯಲ್ಲಿ 135 ಮಂದಿಯ ಸಾವಿಗೆ ಕಾರಣರಾಗಿರುವ ಮೊರ್ಬಿ ತೂಗು ಸೇತುವೆಯ ತಂತಿಗಳಿಗೆ ಮೊದಲೇ ತುಕ್ಕು ಹಿಡಿದಿತ್ತು. ಹೀಗೆಂದು ಗುಜರಾತ್‌ ಹೈಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಾಗಿರುವ ವಿಶೇಷ ತನಿಖಾ ತಂಡದ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

Advertisement

ಜತೆಗೆ ದುರಂತಕ್ಕೆ ಆಡಳಿತಾತ್ಮಕ ಹಾಗೂ ತಾಂತ್ರಿಕ ದೋಷಗಳೇ ಕಾರಣವಾಗಿದೆ ಎಂದು ಹೇಳಿದೆ. ವರದಿಯ ಪ್ರಕಾರ ಸೇತುವೆಯಲ್ಲಿದ್ದ 49 ಕೇಬಲ್‌ ತಂತಿಗಳ ಪೈಕಿ 22 ತಂತಿಗಳು ತುಕ್ಕುಹಿಡಿದಿದ್ದವು ಹಾಗೂ ಮುರಿದಿದ್ದವು. 2022 ಅ.30ರಂದು ಉಳಿದ 27 ತಂತಿಗಳು ಮುರಿದಿದ್ದವು. ನಿರ್ವಹಣಾ ಸಂಸ್ಥೆ ಹಾಗೂ ಪುರಸಭೆ ಅಧಿಕಾರಿಗಳ ಲೋಪವೂ ಕಾರಣವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

 

Advertisement

Udayavani is now on Telegram. Click here to join our channel and stay updated with the latest news.

Next