Advertisement

ಬಾವಿಯಲ್ಲಿ ಯುವಕನ ಶವ ಪತ್ತೆ

11:02 AM Oct 11, 2019 | Mithun PG |

ಉಲ್ಲಾಳ: ಪಿಲಾರು ಲಕ್ಷ್ಮೀ ಗುಡ್ಡೆ ಮನೆಯೊಂದರ ಬಾವಿಯಲ್ಲಿ ಯುವಕನ ಶವವೊಂದು  ಪತ್ತೆಯಾಗಿದ್ದು ಮೃತ ಯುವಕನನ್ನು ಚರಣ್ ರಾಜ್  (25) ಎಂದು ಗುರುತಿಸಲಾಗಿದೆ.

Advertisement

ತೋಟದ ಬಾವಿಗೆ ಬಿದ್ದು ಕುಂಪಲ ಆಶ್ರಯ ಕಾಲೊನಿ ನಿವಾಸಿ ಚರಣ್ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದ ಚರಣ್ ಮೃತದೇಹ ಇಂದು ಬೆಳಿಗ್ಗೆ ಪಿಲಾರು ಲಕ್ಷ್ಮೀಗುಡ್ಡೆಯ ಶ್ರೀಧರ್ ಆಳ್ವ ಎಂಬವರ ತೋಟದ ಬಾವಿಯಲ್ಲಿ ಪತ್ತೆಯಾಗಿತ್ತು. ಕಾಲು ಜಾರಿ ಬಿದ್ದಿರುವುದೋ, ಆತ್ಮಹತ್ಯೆ ಅಥವಾ ಕೊಲೆಯೋ ಎನ್ನುವ ಕುರಿತು ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ

ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರಿನಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next