Advertisement

ಕಾರ್ಪೋರೇಟರ್‌ ಸಂಬಂಧಿ ಮೇಲೆ ಹಲ್ಲೆ: ಆರೋಪ

11:48 AM Nov 10, 2018 | Team Udayavani |

ಬೆಂಗಳೂರು: ಕೆ.ಪಿ.ಅಗ್ರಹಾರ ವಾರ್ಡ್‌ನ ಕಾರ್ಪೋರೇಟರ್‌ ಗಾಯಿತ್ರಿ ಅವರ ಸಂಬಂಧಿ ಬಾಬು ಎಂಬಾತನ ಮೇಲೆ ಕೆ.ಪಿ.ಅಗ್ರಹಾರ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಈ ಬಗ್ಗೆ ಯಾರೂ ದೂರು ನೀಡಿಲ್ಲ, ಯಾರಾದರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ರವಿ ಚೆನ್ನಣ್ಣನವರ್‌ ತಿಳಿಸಿದ್ದಾರೆ.

Advertisement

ನ.8ರಂದು ಮಾಗಡಿ ರಸ್ತೆಯಲ್ಲಿರುವ ಅಂಜನ್‌ ಚಿತ್ರಮಂದಿರದಲ್ಲಿ ತಮಿಳು ಸಿನಿಮಾ ಸರ್ಕಾರ್‌ ಬಿಡುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆ.ಪಿ ಅಗ್ರಹಾರ ಪೊಲೀಸ್‌ ಠಾಣೆಯ ಸಿಬ್ಬಂದಿ ಕೆಂಪಣ್ಣ ಅವರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಬಾಬು ಟಿಕೆಟ್‌ ಪಡೆಯದೇ ಚಿತ್ರಮಂದಿರದೊಳಗೆ ನುಗ್ಗುತ್ತಿದ್ದರು. ಇದನ್ನು ತಡೆದ ಚಿತ್ರಮಂದಿರದ ಸಿಬ್ಬಂದಿ ಟಿಕೆಟ್‌ ಪಡೆದು ಬರುವಂತೆ ಸೂಚಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ಕಾನ್‌ಸ್ಪೇಬಲ್‌ ಕೆಂಪಣ್ಣ ಅವರಿಗೂ ಈ ಬಗ್ಗೆ ದೂರು ನೀಡಿದ್ದರು.

ಆಗ ಕೆಂಪಣ್ಣ , ಟಿಕೆಟ್‌ ಪಡೆಯದೆ ಚಿತ್ರಮಂದಿರಕ್ಕೆ ಹೋಗುತ್ತಿರುವ ಬಗ್ಗೆ ಬಾಬುನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಬಾಬು ಕಾನ್‌ಸ್ಟೆಬಲ್‌ ಕೆಂಪಣ್ಣಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ, ಹಲ್ಲೆಗೆ ಯತ್ನಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ. ಈ ಬಗ್ಗೆ ಕೆ.ಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಟೀ ಕುಡಿಯಲು ಹೋದಾಗ ಪೊಲೀಸರು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಬಾಬು ಆರೋಪಿಸಿದ್ದಾನೆ. ಬಾಬು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next