Advertisement

ಗುಜರಿ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಟೆಂಡರ್‌

01:51 PM Sep 27, 2022 | Team Udayavani |

ಲಾಲ್‌ಬಾಗ್‌: ನಗರದ ಪಾಲಿಕೆ ಆವರಣದಲ್ಲಿ ಕೆಲವು ತಿಂಗಳುಗಳಿಂದ ರಾಶಿ ಹಾಕಲಾಗಿದ್ದ ಗುಜರಿ ತೆರವಿಗೆ ಟೆಂಡರ್‌ ಕರೆಯಲು ಪಾಲಿಕೆ ನಿರ್ಧರಿಸಿದೆ.

Advertisement

ನಗರದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿರುವ ಮಂಗಳೂರು ಪಾಲಿಕೆಯ ಆವರಣದಲ್ಲೇ ಸ್ವಚ್ಛತೆ ಮರೆಯಾಗಿದ್ದು, ಡಂಪಿಂಗ್‌ ಯಾರ್ಡ್‌ ಆಗಿ ಪರಿವರ್ತನೆಯಾಗಿದೆ ಎಂಬ ನಿಟ್ಟಿನಲ್ಲಿ “ಮಹಾನಗರ ಪಾಲಿಕೆ ಆವರಣವೇ ಡಂಪಿಂಗ್‌ ಯಾರ್ಡ್‌’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ ಸುದಿನ’ ಸೆ. 17ರಂದು ವರದಿ ಪ್ರಕಟಿಸಿತ್ತು.

ವರದಿ ಹಿನ್ನೆಲೆಯಲ್ಲಿ ಪಾಲಿಕೆ ಇದೀಗ ಟೆಂಡರ್‌ ಕರೆದು ನಿರುಪಯುಕ್ತ ತ್ಯಾಜ್ಯ ವಿಲೇವಾರಿ ಮಾಡಲು ಮುಂದಾಗಿದೆ. ಮೇಯರ್‌ ಜಯಾನಂದ ಅಂಚನ್‌ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮಂಗಳೂರು ಪಾಲಿಕೆ ಆವರಣದಲ್ಲಿ ಗುಜರಿ ವಾಹನ ಸಹಿತ ಇತರ ನಿರುಪಯುಕ್ತ ವಸ್ತುಗಳು ರಾಶಿ ಬಿದ್ದಿದೆ. “ಸುದಿನ’ದಲ್ಲಿ ಪ್ರಕಟಗೊಂಡ ವರದಿ ಗಮನಕ್ಕೆ ಬಂದಿದೆ. ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುಜರಿ ವಾಹನ ಸಹಿ ತ ಹೆಚ್ಚಿನ ನಿರುಪಯುಕ್ತ ತ್ಯಾಜ್ಯ ಇರುವುದರಿಂದ ಟೆಂಡರ್‌ ಕರೆದು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next