Advertisement

ಉಡುಪಿ: ಚೀನ ಪ್ರವಾಸದಿಂದ ಮರಳಿದ ನಾಲ್ವರಿಗೆ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ

01:01 AM Feb 08, 2020 | Sriram |

ಉಡುಪಿ: ಇತ್ತೀಚೆಗೆ ಚೀನ ಪ್ರವಾಸಕ್ಕೆ ತೆರಳಿ 15 ದಿನಗಳ ಹಿಂದೆ ಸ್ವದೇಶಕ್ಕೆ ಮರಳಿದ ಜಿಲ್ಲೆಯ ಒಟ್ಟು ನಾಲ್ವರನ್ನು ಸಂಶಯಾಸ್ಪದ ಕೊರೊನಾ ವೈರಸ್‌ಗೆ ಪರೀಕ್ಷೆಗೊಳಪಡಿಸಿ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಒಬ್ಬರು ಕಾಪು ತಾಲೂಕಿನವರು. ಮತ್ತೆ ಮೂವರು ಬ್ರಹ್ಮಾವರದ ದಂಪತಿ ಮತ್ತು ಮಗು.

Advertisement

ಇವರೆಲ್ಲರು ಶೀತ ಹಾಗೂ ಗಂಟಲು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದರು. ಪತಿಗೆ ಶೀತ, ಕೆಮ್ಮು ಇದ್ದರೆ ಮಗುವಿಗೆ ಲಘು ಶೀತ ವಿದೆ. ಪತ್ನಿ ಆರೋಗ್ಯವಾಗಿದ್ದಾರೆ.ಅವರ ರಕ್ತ, ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕಾಸರಗೋಡು: 99 ಮಂದಿ ನಿಗಾದಲ್ಲಿ
ಕಾಸರಗೋಡು: ದೇಶಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಚೀನ ಮತ್ತು ಇತರ ದೇಶಗಳಿಂದ ಜಿಲ್ಲೆಗೆ ಆಗಮಿಸಿರುವ 99 ಮಂದಿಯ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 22 ಮಂದಿಯ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, 19 ಮಂದಿಯ ಫಲಿತಾಂಶ ಲಭಿಸಿದೆ. ಒಬ್ಬರಲ್ಲಿ ಮಾತ್ರವೇ ಕೊರೊನಾ ಸೋಂಕು ದೃಢೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next