Advertisement

ಸದನದಲ್ಲೂ ಕೊರೊನಾ ಕೆಮ್ಮು

11:25 PM Mar 10, 2020 | Team Udayavani |

ವಿಧಾನ ಪರಿಷತ್‌: ಸಂವಿಧಾನದ ಮೇಲಿನ ಚರ್ಚೆ ಸಂದರ್ಭದಲ್ಲಿ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಅವರು, ಕೊರೊನಾ ಕಾಲರ್‌ ಟ್ಯೂನ್‌ನಿಂದ ಆಗುತ್ತಿರುವ ಸಮಸ್ಯೆಯನ್ನು ಸದನದ ಗಮನಕ್ಕೆ ತಂದರು. ಕೊರೊನಾ ವೈರಸ್‌ ಬಗ್ಗೆ ಅರಿವು ಮೂಡಿಸುವುದು ಅಗತ್ಯ.

Advertisement

ಆದರೆ, ಇಂದು ಯಾರಿಗೂ ತುರ್ತಾಗಿ ಕರೆ ಮಾಡಲಾಗದ ಸ್ಥಿತಿಗೆ ನಾವು ತಲುಪಿದ್ದೇವೆ. ತುರ್ತಾಗಿ ಕರೆ ಮಾಡಿದರೆ ಯಾರದೋ ಕೆಮ್ಮು ಕೇಳಿಸುತ್ತದೆ. ಇದರಿಂದ ಕರೆ ಮಾಡಲು ತುಂಬ ಸಮಸ್ಯೆಯಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಲು ಯಾವುದಾದರೂ ಕ್ರಮ ತೆಗೆದುಕೊಳ್ಳಿ ಎಂದು ಕಾನೂನು ಸಚಿವ ಮಾಧುಸ್ವಾಮಿಯವರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next