Advertisement

ChatGPT ನೆರವಿನಿಂದ ನಕಲು!

11:29 PM May 30, 2023 | Team Udayavani |

ಹೈದರಾಬಾದ್‌: ತೆಲಂಗಾಣ ಲೋಕಸೇವಾ ಆಯೋಗದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಿಗೆ ಅಕ್ರಮವಾಗಿ ಉತ್ತರಗಳನ್ನು ಹೇಳಲು ಚಾಟ್‌ಜಿಪಿಟಿ ತಂತ್ರಜ್ಞಾನ ಬಳಸಿರುವುದು ಬೆಳಕಿಗೆ ಬಂದಿದೆ.

Advertisement

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌(ಎಇಇ) ಮತ್ತು ವಿಭಾಗೀಯ ಲೆಕ್ಕಾಧಿಕಾರಿಗಳ(ಡಿಎಒ) ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಆರೋಪಿಗಳ ಪೈಕಿ ಒಬ್ಟಾತ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಸಹಾಯದಿಂದ ಉತ್ತರಗಳನ್ನು ಪಡೆದು, ಲಂಚ ನೀಡಿರುವ ಅಭ್ಯರ್ಥಿಗಳಿಗೆ ಬ್ಲೂಟೂಥ್‌ ಸಹಾ ಯದಿಂದ ಉತ್ತರಗಳನ್ನು ರವಾನಿಸಿದ್ದಾನೆ ಎಂಬುದು ವಿಶೇಷ ತನಿಖಾ ತಂಡ(ಎಸ್‌ಐಟಿ)ದ ತನಿಖೆಯಿಂದ ಬಹಿರಂಗವಾಗಿದೆ.

ಹಗರಣ ಸಂಬಂಧ ತೆಲಂಗಾಣ ರಾಜ್ಯ ವಿದ್ಯುತ್‌ ಸರಬರಾಜು ಕಂಪೆನಿ ಲಿ.ನ ಪೆದ್ದಾಪಲ್ಲಿಯ ವಿಭಾಗೀಯ ಎಂಜಿನಿಯರ್‌ ಪೂಲಾ ರಮೇಶ್‌(35) ಎಂಬಾತನನ್ನು ಎಸ್‌ಐಟಿ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.

ಈತ ಮೂರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಜ.22ರಂದು ಎಇಇ ಪರೀಕ್ಷೆ ಮತ್ತು ಫೆ.26ರಂದು ಡಿಎಒ ಪರೀಕ್ಷೆ ನಡೆದಿತ್ತು. ಈ ವೇಳೆ ಏಳು ಮಂದಿ ಅಭ್ಯರ್ಥಿಗಳಿಗೆ ಬ್ಲೂಟೂಥ್‌ ಮೂಲಕ ಉತ್ತರಗಳನ್ನು ಹೇಳಲು ಈತ ಮೊದಲೇ ಯೋಜನೆ ರೂಪಿಸಿಕೊಂಡಿದ್ದ. ಪರೀಕ್ಷೆ ಆರಂಭವಾದ 10 ನಿಮಿಷಗಳಲ್ಲಿ ಪರೀಕ್ಷಾ ಕೇಂದ್ರದ ಪ್ರಾಂಶುಪಾಲರು ಈತನಿಗೆ ಪ್ರಶ್ನೆ ಪತ್ರಿಕೆಗಳ ಫೋಟೋ ಕಳುಹಿಸಿರುವ ಸಾಧ್ಯತೆ ಇದೆ. ಅನಂತರ ಈತ ಚಾಟ್‌ಜಿಪಿಟಿ ಸಹಾದಿಂದ ಉತ್ತರಗಳನ್ನು ಪಡೆದು, ಅವುಗಳನ್ನು ಅಭ್ಯರ್ಥಿಗಳಿಗೆ ಬ್ಲೂಟೂಥ್‌ ಮೂಲಕ ಹೇಳಿದ್ದಾನೆ. ಇದಕ್ಕಾಗಿ ಏಳು ಮಂದಿ ಅಭ್ಯರ್ಥಿಗಳಿಂದ ತಲಾ 40 ಲಕ್ಷ ಪಡೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next