Advertisement

ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ

07:01 PM Nov 27, 2021 | Team Udayavani |

ಮುಂಬಯಿ : ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಬಂಧಿಸಿಡಲಾಗಿದ್ದ 39 ಕಾರ್ಮಿಕರನ್ನು ರಕ್ಷಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಎಲ್ಲ ಕಾರ್ಮಿಕರು ಮಧ್ಯಪ್ರದೇಶದ ರಾಜ್‌ಗರ್‌ ಮೂಲದವರು ಎನ್ನಲಾಗಿದೆ.

Advertisement

39 ಕಾರ್ಮಿಕರನ್ನು ರಾಜ್‌ಗರ್‌ನ ಕಂಟ್ರ್ಯಾಕ್ಟರ್‌ ಒಬ್ಬ ಕರೆದುಕೊಂಡು ಬಂದು ಕೊಲ್ಲಾಪುರಲ್ಲಿ ಕೆಲಸಕ್ಕೆ ಸೇರಿಸಿದ್ದ. ಇಲ್ಲಿ 25 ದಿನಗಳ ಕೆಲಸ ಮಾಡಿದ ಅನಂತರ ಕಾರ್ಮಿಕರು ಸಂಬಳವನ್ನು ಕೇಳಿದ್ದಾರೆ. ಆದರೆ ಸಂಬಳ ಕೊಡದೆ, ಪೀಡಿಸಿ ಅವರನ್ನು ಇಲ್ಲೇ ಬಂಧಿಸಿಟ್ಟುಕೊಳ್ಳಲಾಗಿತ್ತು.

ಈ ವಿಚಾರ ಮಧ್ಯಪ್ರದೇಶದ ಶಾಸಕರೊಬ್ಬರಿಗೆ ತಿಳಿದುಬಂದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದಿಂದ ಪೊಲೀಸರ ವಿಶೇಷ ತಂಡವೊಂದು ಬಂದಿದ್ದು, ಮಹಾ ಪೊಲೀಸರ ಸಹಾಯದೊಂದಿಗೆ ಕಾರ್ಮಿಕರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ : ರೇಪ್ & ಮರ್ಡರ್ : ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next