Advertisement

ಸರ್ಕಾರಿ ಪ್ರೌಢಶಾಲೆಯಲಿ ಕಾನ್ವೆಂಟ್‌ ಆಡಳಿತ

06:02 PM May 24, 2022 | Team Udayavani |

ಮುಳಬಾಗಿಲು: ಇನ್ಫೋಸಿಸ್‌ ಪ್ರತಿಷ್ಠಾನ ಸುಮಾರು 2 ಕೋಟಿ ವೆಚ್ಚದಲ್ಲಿ ನಂಗಲಿ ಗ್ರಾಮದ ಶ್ರೀ ವರಸಿದ್ಧಿ ವಿನಾಯಕ ಅನುದಾನಿತ ಪ್ರೌಢಶಾಲೆ ನಿರ್ಮಿಸಿಕೊಟ್ಟಿದೆ. ಈ ಕಟ್ಟಡದಲ್ಲಿ 3 ವರ್ಷಗಳಿಂದ ನಡೆಯು ತ್ತಿರುವ ಆಂಗ್ಲ ಮಾಧ್ಯಮ ಶಾಲೆ (ಕಾನ್ವೆಂಟ್‌ ಶಾಲೆ) ಅಧಿಕೃತವೋ ? ಅಥವಾ ಅನಧೀಕೃತವೋ? ಎಂಬುದು ತಿಳಿಯದಾಗಿದೆ. ಇದರಿಂದ ಶಿಕ್ಷಣಇಲಾಖೆ ಅಧಿಕಾರಿಗಳು ಶಾಲೆಗೆ ನೋಟಿಸ್‌ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

1962ರಲ್ಲಿ ನಂಗಲಿಯಲ್ಲಿ ಖಾಸಗಿ ಆಡಳಿತ ಮಂಡಳಿ ಯೊಂದು ಶ್ರೀ ವರಸಿದ್ಧಿ ವಿನಾಯಕ ಪ್ರೌಢ ಶಾಲೆಯನ್ನು ಪ್ರಾರಂಭಿಸಿದ್ದು, ಶಾಲೆಯಲ್ಲಿ 8, 9 ಮತ್ತು 10ನೇ ತರಗತಿ 200ಕ್ಕೂ ಹೆಚ್ಚು ಮಂದಿ ಓದುತ್ತಿದ್ದಾರೆ. ಇದು ಸರ್ಕಾರಿ ಅನುದಾನಿತ ಶಾಲೆಯಾಗಿದ್ದು,ಇನ್ಫೋಸಿಸ್‌ ಪ್ರತಿಷ್ಠಾನ ಸುಮಾರು 2 ಕೋಟಿ ವೆಚ್ಚದಲ್ಲಿಗುಣಮಟ್ಟದ 10 ಶಾಲಾ ಕೊಠಡಿಗಳು,ಬಾಲಕರು-ಬಾಲಕಿಯರಿಗೆ ತಲಾ ಒಂದು ಪ್ರತ್ಯೇಕಶೌಚಾಲಯ, ಶಿಕ್ಷಕ ಶಿಕ್ಷಕಿಯರಿಗೆ ತಲಾ ಒಂದುಶೌಚಾಲಯ ಸೈಕಲ್‌ ನಿಲ್ದಾಣ, ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಿ ಸೌಕರ್ಯ ಕಲ್ಪಿಸಿದ್ದಾರೆ.

ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡುವ ಉದ್ದೇಶದಿಂದ 35 ಕಂಪ್ಯೂಟರ್‌ಗಳನ್ನುಸಹ ಇನ್ಫೋಸಿಸ್‌ ನಿಂದ ನೀಡಲಾಗಿದೆ. ಕಂಪ್ಯೂಟರ್‌ಗಳನ್ನು ಇದುವರೆಗೂ ಶಾಲೆಯಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿಲ್ಲ.

ಶಾಲೆ ಐದು ಕೊಠಡಿಗಳಲ್ಲಿ ಕಾನ್ವೆಂಟ್‌: ಇನ್ಫೋಸಿಸ್‌ಪ್ರತಿಷ್ಠಾನವು ಶಾಲಾ ಆವರಣದಲ್ಲಿ ನಿರ್ಮಿಸಿರುವ 10ಕೊಠಡಿಗಳ ಪೈಕಿ ಮೇಲಿನ ಅಂತಸ್ತಿನಲ್ಲಿರುವ ಐದುಕೊಠಡಿಗಳಲ್ಲಿ ಮಾತ್ರ ಪ್ರೌಢ ಶಾಲೆ ವಿದ್ಯಾರ್ಥಿಗಳುವ್ಯಾಸಾಂಗ ಮಾಡುತ್ತಿದ್ದು, ಇವು ಮಾತ್ರ ಮುಖ್ಯಶಿಕ್ಷಕರ ವಶದಲ್ಲಿದೆ. ಆದರೆ, ಕೆಳ ಭಾಗದ 5ಕೊಠಡಿಗಳಲ್ಲಿ 2019ರ ಸಾಲಿನಿಂದ ಆಂಗ್ಲ ಮಾದ್ಯಮ(ಕಾನ್ವೆಂಟ್‌) ಶಾಲೆಯನ್ನು ಆಗಿನ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಮಧುಸೂದನ್‌ ಪ್ರಾರಂಭಿಸಿದ್ದಾರೆ. ಅವರು 2020ರ ಅಕ್ಟೋಬರ್‌ನಲ್ಲಿ ನಿವೃತ್ತಿಯಾಗಿದ್ದಾರೆ.

ಇನ್ಫೋಸಿಸ್‌ ನಿರ್ಮಿಸಿರುವ 5 ಕೊಠಡಿಗಳನ್ನುಮುಖ್ಯ ಶಿಕ್ಷಕ ಮಧುಸೂದನ್‌ ನಿವೃತ್ತಿಯಾದರೂ ಪ್ರೌಢ ಶಾಲೆಗೆ ನೀಡದೇ ತಮ್ಮ ವಶದಲ್ಲಿ ಕಾನ್ವೆಂಟ್‌ ನಡೆಸುತ್ತಿದ್ದು, ಕಳೆದ ವರ್ಷ ಸುಮಾರು 70-80ಮಕ್ಕಳು ವ್ಯಾಸಾಂಗ ಮಾಡುತ್ತಿದ್ದರು, ಆದರೆ ಪ್ರಸಕ್ತಸಾಲಿನಲ್ಲಿ ಇನ್ನು ಕಾನ್ವೆಂಟ್‌ ಶಾಲೆ ಆರಂಭವಾಗಿಲ್ಲ.ಈ ಕುರಿತು ಕ್ಷೇತ್ರ ಸಮನ್ವಯಾಧಿಕಾರಿಪಿ.ಸೋಮೇಶ್‌ ಅನುದಾನಿತ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಪ್ರೌಢ ಶಾಲೆಯ 5 ಕೊಠಡಿಗಳಲ್ಲಿ ಕಾನ್ವೆಂಟ್‌ ಶಾಲೆನಡೆಸುತ್ತಿರುವ ಕುರಿತು ಮುಖ್ಯ ಶಿಕ್ಷಕ ಶ್ರೀನಿವಾಸ್‌ಗೆ ದಾಖಲೆ ಕೇಳಿದಾಗ ಈ ಕುರಿತು ದಾಖಲೆಗಳು ಲಭ್ಯವಿಲ್ಲ ಎಂದು ತಿಳಿಸಿದ್ದು, ಕ್ಷೇತ್ರ ಸಮನ್ವಯಾಧಿಕಾರಿಗಳು, ಮುಖ್ಯ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಕಾನ್ವೆಂಟ್‌ ಶಾಲೆಗೆಸರ್ಕಾರ ಅನುಮತಿ ನೀಡಿದೆಯೇ ? ಇನ್ಫೋಸಿಸ್‌ಅನುಮತಿ ನೀಡಿದೆಯೇ ? ಈ ಕುರಿತಾದ ಮಾಹಿ ತಿ ಯನ್ನು 7 ದಿನಗಳ ಒಳಗಾಗಿ ಬಿಇಒ ಕಚೇರಿಗೆಸಲ್ಲಿಸಲು ಸೂಚಿಸಿದ್ದರು, ಆದರೆ ಇದುವರೆಗೂ ಬಿಇಒ ಕಚೇರಿಗೆ ಮಾಹಿತಿ ನೀಡಿಲ್ಲ.

ನಂಗಲಿ ಶ್ರೀ ವರಸಿದ್ಧಿ ವಿನಾಯಕ ಅನುದಾನಿತ ಪ್ರೌಢಶಾಲೆಯಲ್ಲಿಕಾನ್ವೆಂಟ್‌ ಪ್ರಾರಂಭ ಕುರಿತಂತೆ 7 ದಿನಗಳಒಳಗಾಗಿ ಸಲ್ಲಿಸುವಂತೆ ಸೂಚಿಸಿದ್ದರೂಇದುವರೆಗೂ ಮಾಹಿತಿ ನೀಡದೇಇರುವುದರಿಂದ ಕ್ರಮವಹಿಸಲುಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. – ಪಿ.ಸೋಮೇಶ್‌, ಕ್ಷೇತ್ರ ಸಮನ್ವಯಾಧಿಕಾರಿ ಮುಳಬಾಗಿಲು

ಕ್ಷೇತ್ರ ಸಮನ್ವಯಾಧಿಕಾರಿಗಳು ನಮಗೆ ನೀಡಿರುವ ನೋಟಿಸ್‌ಗೆ ಮಾಹಿತಿ ಒದಗಿಸಲು ಅಗತ್ಯವುಳ್ಳ ದಾಖಲೆಗಳನ್ನು ನೀಡುವಂತೆ ನಮ್ಮ ಶಾಲೆಯ ಆಡಳಿತ ಮಂಡಳಿಗೆ ಕೇಳಿದ್ದೇನೆ.ಆದರೆ. ಅವರು ಇದುವರೆಗೂ ದಾಖಲೆಗಳನ್ನು ನೀಡಿಲ್ಲ -ಎನ್‌.ಎಲ್‌.ಶ್ರೀನಿವಾಸ್‌, ಮುಖ್ಯಶಿಕ್ಷಕ, ಶ್ರೀ ವರಸಿದ್ದಿ ವಿನಾಯಕ ಅನುದಾನಿತ ಪ್ರೌಢಶಾಲೆ

ಕಾನ್ವೆಂಟ್‌ ನಡೆಸುತ್ತಿರುವ ಕುರಿತು ನಮಗೆ ಮಾಹಿತಿ ಇಲ್ಲ. ಕ್ಷೇತ್ರ ಸಮನ್ವಯಾಧಿಕಾರಿ ಪಿ. ಸೋಮೇಶ್‌ರೊಂದಿಗೆ ಚರ್ಚಿಸಿ ಮತ್ತೂಮ್ಮೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. – ಚಂದ್ರಶೇಖರ್‌, ಕ್ಷೇತ್ರ ಶಿಕ್ಷಣಾಧಿಕಾರಿ

– ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next