Advertisement

ವಿವಾದತ್ಮಕ ಹೇಳಿಕೆ: ಶ್ರೀರಂಗಪಟ್ಟಣ ರಿಷಿಕುಮಾರ ಸ್ವಾಮಿ ಬಂಧನ

01:42 PM Jan 18, 2022 | Team Udayavani |

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಮಸೀದಿ ಕುರಿತು ವಿವಾದತ್ಮಕ ಹೇಳಿಕೆ ನೀಡಿದ್ದ ರಿಷಿಕುಮಾರ ಸ್ವಾಮೀಜಿಯನ್ನು  ಪೊಲೀಸರು ಬಂಧಿಸಿದ್ದಾರೆ.

Advertisement

ಬಾಬರಿ ಮಸೀದಿಯಂತೆ  ಶ್ರೀರಂಗಪಟ್ಟಣದ ಒಡೆಯಬೇಕೆನ್ನುವ ಹೇಳಿಕೆ ನೀಡಿದ್ದ ರಿಷಿಕುಮಾರ ಸ್ವಾಮೀಜಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು, ಕೂಡಲೇ ಪೊಲೀಸರು  ಚಿಕ್ಕಮಗಳೂರಲ್ಲಿ ಋಷಿ ಕುಮಾರ ಸ್ವಾಮೀಜಿ ಬಂಧಿಸಿದ್ದಾರೆ.

ಸಿಪಿಐ ಪುನೀತ್ ನೇತೃತ್ವದಲ್ಲಿ ಶ್ರೀರಂಗಪಟ್ಟಣ ಠಾಣೆಗೆ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ವಿಚಾರಣೆ ನಡೆಸುತ್ತಿದ್ದಾರೆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಜಾಮೀನಿಗೆ ಅರ್ಜಿ: ಪಟ್ಟಣ ಪೊಲೀಸರು ರಿಷಿಕುಮಾರಸ್ವಾಮೀಜಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ವಕೀಲರು ರಿಷಿ ಕುಮಾರಸ್ವಾಮಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು  ಸ್ವಾಮೀಜಿ ಪರ ವಕೀಲ ಬಾಲರಾಜು ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next