Advertisement

ಪೊಲೀಸರಿಗೆ ರೋಗನಿರೋಧಕ ಔಷಧ ಕೊಡುಗೆ

09:44 PM May 18, 2020 | Sriram |

ಕುಂದಾಪುರ: ಇಲ್ಲಿನ ಕುಂದೇಶ್ವರ ರಸ್ತೆಯ ಉತ್ತಮ್‌ ಹೋಮಿಯೋ ಕ್ಲಿನಿಕ್‌ ವತಿಯಿಂದ 400 ಪೊಲೀಸ್‌ ಕುಟುಂಬಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು ಸೋಮವಾರ ನೀಡಲಾಯಿತು.

Advertisement

ವೈದ್ಯ ಡಾ| ಉತ್ತಮ್‌ ಕುಮಾರ್‌ ಶೆಟ್ಟಿ ಅವರು ಕುಂದಾಪುರ ಉಪವಿಭಾಗ ಎಎಸ್‌ಪಿ ಹರಿರಾಮ್‌ ಶಂಕರ್‌ ಅವರಿಗೆ ಔಷಧ ಹಸ್ತಾಂತರಿಸಿದರು. ಉಪವಿಭಾಗದ 400 ಪೊಲೀಸ್‌ ಕುಟುಂಬಗಳಿಗೆ ಅವಶ್ಯವಿದ್ದಷ್ಟು ಔಷಧವನ್ನು ನೀಡಲಾಗಿದೆ. ಈ ಔಷಧ ಭಾರತೀಯ ವೈದ್ಯಕೀಯ ಮಂಡಳಿಯ ಶಿಫಾರಸಿನ ಔಷಧವೇ ಆಗಿದೆ.

ಜಪ್ತಿ ಪ್ರದೇಶದ 3,000 ಮಂದಿಗೆ ಈ ಔಷಧವನ್ನು ಆಶಾ ಕಾರ್ಯಕರ್ತೆಯರ ಮೂಲಕ ನೀಡಲಾಗುವುದು ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next