Advertisement
ಸತತವಾಗಿ ದಿನಬಿಟ್ಟು ದಿನ ಸುರಿದ ಮಳೆಯಿಂದ ಒಂದಿಲ್ಲೊಂದು ಗ್ರಾಮದಲ್ಲಿ ನೀರಿನ ರಭಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಕೊಚ್ಚಿ ಹೋಗುತ್ತಿದೆ. ಹೊಲದಲ್ಲಿ ನೀರು ನಿಂತುಕೊಂಡು ಬಿತ್ತನೆಗೆ ಅಡ್ಡಿಯಾಗಿದೆ. ಗುರುವಾರ ರಾತ್ರಿ ನಿಂಬರಗಾ ವಲಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅಮರ್ಜಾ ಅಣೆಕಟ್ಟೆ ಕೆಳಭಾಗದಲ್ಲಿ ನದಿ ನೀರು ಉಕ್ಕಿಹರಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಕಬ್ಬು ಕೊಚ್ಚಿಕೊಂಡು ಹೋಗಿದೆ.
Related Articles
Advertisement
ಜೊತೆಯಲ್ಲಿದ್ದ ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ ಮತ್ತು ಗ್ರಾಮ ಲೇಖಪಾಲಕ ರಮೇಶ ಮಾಳಿ ಅವರನ್ನು ವ್ಯಾಪ್ತಿಯ ಹಾನಿಯ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ತುರ್ತು ಸ್ಪಂದನೆ ಇಲ್ಲ: ಮಳೆಯ ಆರ್ಭಟಕ್ಕೆ ತಾಲೂಕಿನ ಅನೇಕ ರಸ್ತೆಗಳ ಸಂಪರ್ಕ ಕಡಿತಗೊಂಡಸಂಚಾರಕ್ಕೆ ತಡೆಯಾದ ಮೇಲೂ ಸಂಬಂ ಧಿತ ಇಲಾಖೆಗಳಿಂದ ತುರ್ತು ಸ್ಪಂದನೆ ಇಲ್ಲವಾಗಿದೆ. ಹೀಗಾಗಿ ಗ್ರಾಮೀಣ ಜನರು ನಗರ ಪಟ್ಟಣಗಳಿಗೆ ಸಂಚರಿಸಲು ಸಂಪರ್ಕ ದೊರೆಯದೆ ತೀವ್ರ ಪರದಾಡುತ್ತಿದ್ದಾರೆ.
ಮಳೆ ವಿವರ: ಜೂನ್ 16ರಂದು ಆಳಂದ ಮಳೆಮಾಪನ ಕೇಂದ್ರದಲ್ಲಿ 12.4 ಮಿ.ಮೀ, ಖಜೂರಿ 54.6 ಮಿ.ಮೀ, ನರೋಣಾ 60 ಮಿ.ಮೀ, ನಿಂಬರಗಾ 98 ಮಿ.ಮೀ, ಮಾದನಹಿಪ್ಪರಗಾ 13.4 ಮಿ.ಮೀ, ಸರಸಂಬಾ 2.4 ಮಿ.ಮೀ. ಕೊರಳ್ಳಿ 80 ಮಿ.ಮೀ ಮಳೆಯಾಗಿದೆ.