Advertisement

ಘಾತುಕರ ಕೈವಾಡ: ರಜನಿ ಅಭಿಮತ

06:00 AM May 31, 2018 | Team Udayavani |

ತೂತುಕುಡಿ: ಸ್ಟರ್ಲೈಟ್‌ ತಾಮ್ರ ಉತ್ಪಾದನಾ ಘಟಕದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸಮಾಜ ವಿರೋಧಿ ಶಕ್ತಿಗಳ  ಕೈವಾಡ ಇದೆ. ಅವುಗಳನ್ನು ತಡೆಯಲು ದಿ.ಜಯಲಲಿತಾ ಅವರ ಕಠಿಣ ಮಾರ್ಗಗಳನ್ನು ಪಾಲಿಸಬೇಕು ಎಂದು ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಹೇಳಿದ್ದಾರೆ. 

Advertisement

ಕಳೆದ ವಾರ ಘಟಕದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಗಾಯಗೊಂಡವರನ್ನು ಭೇಟಿಯಾದ ಬಳಿಕ ಮಾತನಾಡಿದರು. ಜಿಲ್ಲಾಧಿ ಕಾರಿ ಕಚೇರಿ ಮೇಲೆ ದಾಳಿ, ಸ್ಟರ್ಲೈಟ್‌ ಘಟಕದ ವಸತಿ ಸಮುಚ್ಚಯಕ್ಕೆ ಬೆಂಕಿ ಹಚ್ಚಿದ್ದು ಸೇರಿದಂತೆ ದಾಂಧಲೆ ನಡೆಸಿದ್ದು ಜನಸಾಮಾನ್ಯರಲ್ಲ. ಅದು ಸಮಾಜ ವಿರೋಧಿ ಶಕ್ತಿಗಳ ಕೈವಾಡ . ಅಂಥವರ ವಿರುದ್ಧ ತಮಿಳುನಾಡು ಸರ್ಕಾರ ಕಠಿಣವಾಗಿಯೇ ವರ್ತಿಸಬೇಕು ಎಂದು ಹೇಳಿದ್ದಾರೆ ರಜನಿ. ಇದರ ಜತೆಗೆ ಗಾಯಗೊಂಡ 48 ಮಂದಿಗೆ ತಲಾ 10 ಸಾವಿರ ರೂ.ಗಳ ವೈಯಕ್ತಿಕ ಪರಿಹಾರವನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next