Advertisement

ಮುಂದುವರಿದ ವರುಣನ ಅಬ್ಬರ: 5 ಸಾವು

01:18 PM Jul 01, 2019 | Sriram |

ನವದೆಹಲಿ/ಮುಂಬೈ: ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಸಂಬಂಧಿ ಪ್ರತ್ಯೇಕ ಘಟನೆಗಳಲ್ಲಿ ಶನಿವಾರ ಐವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಅಂಧೇರಿ ಉಪನಗರದಲ್ಲಿ ಹೌಸಿಂಗ್‌ ಸೊಸೈಟಿಯೊಂದರ ಗೋಡೆ ಕುಸಿದುಬಿದ್ದಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ, ಆ ಪ್ರದೇಶದಲ್ಲಿ ಪಾರ್ಕ್‌ ಮಾಡಲಾಗಿದ್ದ ಕೆಲವು ವಾಹನಗಳಿಗೆ ಹಾನಿಯಾಗಿವೆ.

Advertisement

ವರುಣನ ಅಬ್ಬರದಿಂದಾಗಿ 100ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, 39 ಶಾರ್ಟ್‌ ಸರ್ಕ್ನೂಟ್ ಘಟನೆಗಳು ವರದಿಯಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗಿವೆ. ಶುಕ್ರವಾರ ಮುಂಬೈನಲ್ಲಿ ದಾಖಲೆಯ 235 ಮಿ.ಮೀ. ಮಳೆಯಾಗಿದೆ.

ಸಿಡಿಲಿಗೆ 3 ಬಲಿ: ಜಾರ್ಖಂಡ್‌ನ‌ಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಇಲ್ಲಿನ ಗುಮ್ಲಾದಲ್ಲಿ ಶನಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ನಾಳೆ, ನಾಡಿದ್ದು ಭಾರೀ ಮಳೆ: ಒಡಿಶಾ, ಛತ್ತೀಸ್‌ಗಡ ರಾಜ್ಯಗಳಲ್ಲಿ ಜು.1 ಮತ್ತು 2 ರಂದು ಭಾರೀ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮುನ್ಸೂಚನೆ ನೀಡಿದೆ. ಇದೇ ವೇಳೆ, ಮುಂಗಾರು ಚುರುಕಾಗಿರುವ ಕಾರಣ ಗುಜರಾತ್‌ನ ಹಲವು ಭಾಗಗಳಲ್ಲಿ ಮಳೆಯಾಗುತ್ತಿವೆ. ಹರಿದ್ವಾರ, ಋಷಿಕೇಶದಲ್ಲೂ ಉತ್ತಮ ಮಳೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next