Advertisement

ಕಿರಿಯ ವೈದ್ಯರಿಂದ ಮುಂದುವರಿದ ಪ್ರತಿಭಟನೆ

02:50 PM Nov 13, 2021 | Team Udayavani |

ಮೈಸೂರು: ಕೋವಿಡ್‌ ಅಪಾಯದ ನಡುವೆ ಸೇವೆ ಸಲ್ಲಿಸಿದ್ದರೂ, ತಮ್ಮ ಸಂಬಳ ಮತ್ತು ಭತ್ಯೆವನ್ನು ಪೂರ್ಣವಾಗಿ ಪಾವತಿಸಿಲ್ಲ ಎಂದು ಆರೋಪಿಸಿ ಕೆ.ಆರ್‌.ಆಸ್ಪತ್ರೆಯ ಸ್ಥಾನಿಕ ವೈದ್ಯರು, ಕಿರಿಯ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಇಂಟರ್ನಿಗಳು ಆರಂಭಿಸಿರುವ ಮುಷ್ಕರ ಶುಕ್ರವಾರ 2ನೇ ದಿನಕ್ಕೆ ಕಾಲಿಟ್ಟಿತು.

Advertisement

ಶುಕ್ರವಾರವೂ ರೆಸಿಡೆಂಟ್‌ ಡಾಕ್ಟರ್ ಅಸೋಸಿಯೇಷನ್‌ ನೇತೃತ್ವದಲ್ಲಿ ಧರಣಿ ಮುಂದುವರಿಸಿದ ಪ್ರತಿಭನಾಕಾರರು ಕೆ.ಆರ್‌.ಆಸ್ಪತ್ರೆ ಆಸ್ಪತ್ರೆ ಆವರಣದಿಂದ ಇರ್ವಿನ್‌ ರಸ್ತೆ, ಜೆಎಲ್‌ಬಿ ರಸ್ತೆ, ವಿನೋಬ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೋವಿಡ್‌ ಭತ್ಯೆ ಪಾವತಿಸಬೇಕು.

ಇದನ್ನೂ ಓದಿ:-  ಕಲಬುರಗಿ ಪಾಲಿಕೆಯಲ್ಲಿ ವಾಮಮಾರ್ಗದಿಂದ ಆಡಳಿತ ಬರಲು ಬಿಜೆಪಿ ತಂತ್ರ: ಕಾಂಗ್ರೆಸ್

ಬಾಕಿ ವೇತನ ಪಾವತಿಸಬೇಕು. ಎರಡನೇ ವರ್ಷದ ಪಿಜಿಗಳಿಗೆ ಜುಲೈ ತಿಂಗಳಿಗೆ ಬಾಕಿ ಇರುವ 5,000 ಸ್ಟೈಫ‌ಂಡ್‌ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು ಪ್ರತಿಭಟನೆಯಲ್ಲಿ ಅಸೋಸಿಯೇ ಷನ್‌ ಅಧ್ಯಕ್ಷ ಡಾ.ವಿಜಯ್‌ ಕುಮಾರ್‌, ಉಪಾ ಧ್ಯಕ್ಷ ಡಾ.ಕೆ.ಕೆ.ಅಬ್ದುಲ್ಲಾ, ಡಾ.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಡಾ.ವಿಶಾಲ್‌ ಹುಬ್ಬಳ್ಳಿ, ಡಾ. ಸಂದೀಪ್‌ ಗಂಗಾ, ಡಾ.ಎ.ಪೂರ್ಣಿಮಾ, ಸಲಹೆಗಾರ ರಾದ ಡಾ.ಶಿವಾನಂದ, ಡಾ.ಕಿಶೋರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next