Advertisement

ಮೂಡಿಗೆರೆಯಲ್ಲಿ ಮುಂದುವರಿದ ಆಕ್ರೋಶ; ಫಾರೆಸ್ಟ್‌ ಆಫೀಸ್ ಪುಡಿ ಪುಡಿ

02:54 PM Nov 25, 2022 | Team Udayavani |

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಮಹಿಳೆಯ ಮೇಲೆ ಆನೆ ದಾಳಿ ನಡೆದ ಬಳಿಕ ಜನರ ಆಕ್ರೋಶ ಮುಂದುವರಿದಿದ್ದು ಕುಂದೂರು ಗ್ರಾಮದಲ್ಲಿ ಶುಕ್ರವಾರ ಆಕ್ರೋಶಿತರ ಗುಂಪು ಅರಣ್ಯ ಇಲಾಖೆಗೆ ಸೇರಿದ ಕಳ್ಳ ಬೇಟೆ ನಿಗ್ರಹ ಶಿಬಿರವನ್ನು ಧ್ವಂಸ ಮಾಡಿದೆ.

Advertisement

ಕಚೇರಿಗೆ ನುಗ್ಗಿ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲವೆಂದು ಆಕ್ರೋಶ ಹೊರ ಹಾಕಲಾಗಿದೆ.

ಆನೆ ನಿಯಂತ್ರಿಸಲು ಆಗುವುದಿಲ್ಲ, ತಿನ್ನೋಕೆ ಸೋನಾ ಮುಸುರಿ ಅಕ್ಕಿ ಬೇಕು ಎಂದು ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿ ಕಾರಲಾಗಿದೆ.

ನಾಲ್ಕು ದಿನದ ಹಿಂದೆ ನಡೆದಿರುವ ಘಟನೆಯಿಂದ, ಆನೆಗಳ ನಿರಂತರ ದಾಳಿಯಿಂದ ಕಂಗೆಟ್ಟಿರುವ ಜನರ ಆಕ್ರೋಶದ ಕಟ್ಟೆ ಮತ್ತೆ ಒಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next