Advertisement

ವಿಧಾನಸಭೆ ಸಚಿವಾಲಯಕ್ಕೆ ಮುಂದುವರೆದ ನೇಮಕ

06:40 AM Mar 15, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಸಚಿವಾಲಯಕ್ಕೆ ವಿವಿಧ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿ ಈಗಲೂ ಮುಂದುವರೆದಿದೆ. ಈಗಾಗಲೇ 90 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ 161 ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿದ್ದು ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಮತ್ತೆ ಆರು ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ.ಅವರಲ್ಲಿ ನಾಲ್ವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರನ್ನೇ ನೇಮಿಸಿಕೊಳ್ಳಲಾಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್‌ ಎಸ್‌, ನಂಜುಂಡಸ್ವಾಮಿ ಎಸ್‌. ರೇಖಾ ಎಸ್‌, ರಾಜು ಆರ್‌. ಅವರನ್ನು ವಿಧಾನಸಭೆ ಸಚಿವಾಲಯದ ಸ್ವೀಪರ್‌ ಕೆಲಸಕ್ಕೆ ನೇಮಕ ಮಾಡಿ ಮಾರ್ಚ್‌ 9 ರಂದು ಆದೇಶ ಹೊರಡಿಸಲಾಗಿದೆ. ಇವರೊಂದಿಗೆ ಪುಷ್ಪಾ ಹಾಗೂ ವೆಂಕಟೇಶ್‌ ಜಿ.ಬಿ. ಎನ್ನುವವರನ್ನೂ ನೇಮಿಸಿ ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next