Advertisement

ಚರಂಡಿಗೆ ಅಡ್ಡಲಾಗಿ ಒಡ್ಡು ನಿರ್ಮಾಣ: ಕ್ರಮಕ್ಕೆ ಆಗ್ರಹ

06:22 PM Aug 03, 2022 | Shwetha M |

ಲಿಂಗಸುಗೂರು: ಐದನಾಳ ಗ್ರಾಮದಲ್ಲಿ ಚರಂಡಿಗೆ ಕೆಲವು ವ್ಯಕ್ತಿಗಳು ಅಡ್ಡಲಾಗಿ ಒಡ್ಡು ನಿರ್ಮಿಸಿದ್ದರಿಂದ ಚರಂಡಿ ನೀರು ಹರಿದು ಹೋಗಲು ಆಗದೇ ರಸ್ತೆಯಲ್ಲಿ ನಿಲ್ಲುತ್ತಿದ್ದರಿಂದ ಪರದಾಡುವಂತಾಗಿದೆ.

Advertisement

ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಆಗ್ರಹಿಸಿ ಗ್ರಾಮದ ನಿವಾಸಿಗಳು ತಾಪಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಚರಂಡಿ ನೀರಿನ ಹರಿಗೆ ಕೆಲವರು ಉದ್ದೇಶ ಪೂರ್ವಕವಾಗಿ ಒಡ್ಡು ಹಾಕಿದ್ದರಿಂದ ಚರಂಡಿ ನೀರು ಸರಾಗವಾಗಿ ಮುಂದೆ ಹರಿಯದೇ ಪಕ್ಕದಲ್ಲಿರುವ ದಲಿತ ಕಾಲೋನಿ ರಸ್ತೆಯಲ್ಲಿ ನಿಲ್ಲುತ್ತಿದೆ. ಇದರಿಂದ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಅಲ್ಲದೇ ಮಲೇರಿಯಾ, ಡೆಂಘ್ಯೂದಂತಹ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ. ಈ ಬಗ್ಗೆ ಗ್ರಾಪಂಗೆ ಸಾಕಷ್ಟು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ, ಚರಂಡಿ ನೀರು ಹರಿವಿಗೆ ಅಡ್ಡಲಾಗಿರುವ ಒಡ್ಡು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶಿವು, ದುರಗಮ್ಮ, ಹನುಮಂತ, ವೀರಭದ್ರ, ಬಸಲಿಂಗಪ್ಪ, ಶರಣಮ್ಮ, ಮಲ್ಲಮ್ಮ, ದೇವಮ್ಮ, ಹುಲಗಮ್ಮ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next