Advertisement

ಸಂವಿಧಾನ ದೇಶದ ಪವಿತ್ರ ಗ್ರಂಥ: ನ್ಯಾ|ಪಾಟೀಲ

12:20 PM Dec 11, 2018 | Team Udayavani |

ಲಿಂಗಸುಗೂರು: ಸಂವಿಧಾನ ದೇಶದ ಪವಿತ್ರ ಗ್ರಂಥವಾಗಿದೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಸಂದೀಪ ಪಾಟೀಲ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲೂಕು ಘಟಕ ಸಹಯೋಗದಲ್ಲಿ ಸೋಮವಾರ ಪಟ್ಟಣದ ವಿಸಿಬಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಂವಿಧಾನದಡಿ ಕಾನೂನು ರಚನೆಯಾಗುತ್ತವೆ. ಸಂವಿಧಾನ ವಿರುದ್ಧವಾಗಿ ಕಾನೂನು ರಚನೆ ಮಾಡುವುದು ಅಸಾಧ್ಯದ ಕೆಲಸವಾಗಿದೆ. ಪ್ರತಿಯೊಂದು ಕಾರ್ಯ ಚಟುವಟಿಕೆಗಳು ಸಂವಿಧಾನದಡಿ ನಡೆಯುತ್ತಿವೆ. ದೇಶದ ಗಡಿ ಕಾಯುವ ಸೈನಿಕರು ತಮ್ಮ ಜೀವನವನ್ನು ಮುಡುಪಾಗಿಟ್ಟು ಹೋರಾಡುತ್ತಿರುವುದರಿಂದ ನಾವು ದೇಶದಲ್ಲಿ ಶಾಂತಿಯಿಂದ ಜೀವನ ನಡೆಸಲು ಕಾರಣವಾಗಿದೆ. ಸಮಾಜದ ಸುಧಾರಣೆ ಪ್ರತಿಯೊಬ್ಬರ ಜವಾಬ್ದಾರಿ. ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಸಹಾಯಕ ಆಯುಕ್ತ ಎಂ.ಪಿ.ಮಾರುತಿ ಮಾತನಾಡಿ, ಸಾಧನೆಗೆ ವಿದ್ಯಾರ್ಥಿಗಳು ಪ್ರಯತ್ನ ಪಡಬೇಕು. ಗ್ರಾಮೀಣ ಭಾಗದಲ್ಲಿ ಕಾನೂನು ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ ಎಂದರು.

ವಕೀಲರ ಸಂಘ ಅಧ್ಯಕ್ಷ ಮಹಾಲಿಂಗಪ್ಪ ಪಾಟೀಲ, ಎಪಿಪಿ ವಸಂತ, ತಹಶೀಲ್ದಾರ್‌ ಚಾಮರಾಜ ಪಾಟೀಲ, ಪ್ರಾಚಾರ್ಯ ಪಿ.ಜಗದೀಶ, ಟಿಎಚ್‌ಒ ರುದ್ರಗೌಡ ಪಾಟೀಲ, ಸಿಡಿಪಿಒ ಪ್ರೇಮಮೂರ್ತಿ, ಎಚ್‌ಆರ್‌ಎಸಿಎಫ್‌ ಅಧ್ಯಕ್ಷ ಹುಸೇನಬಾಷಾ, ಕಾರ್ಯದರ್ಶಿ ಶೇಖ್‌ ಅಹ್ಮದ್‌, ಆಶಿಕ್‌ ಅಹ್ಮದ್‌, ಡಾ| ಪದ್ಮರಾಜ ಜೈನ ಸೇರಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next