Advertisement

ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ನಾಂದಿ

04:28 PM Jan 27, 2021 | Team Udayavani |

ಕನಕಪುರ: ಮೇಲು ಕೀಳು ಎಂಬ ತಾರತಮ್ಯವನ್ನು ತೊಡೆದು ಹಾಕಿ ಸಮ ಸಮಾಜ ನಿರ್ಮಾಣ ಮಾಡಲು ಡಾ.ಬಿ.ಆರ್‌. ಅಂಬೇಡ್ಕರ್‌ ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ್ದಾರ ಎಂದು ದೇಗುಲ ಮಠದ ಹಿರಿಯ ಮುಮ್ಮಡಿ ನಿರ್ವಾಣ ಸ್ವಾಮೀಜಿ ತಿಳಿಸಿದರು.

Advertisement

ನಗರದ ದೇಗುಲ ಮಠದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಪರಸ್ಪರ ಸ್ನೇಹದಿಂದ ಮೇಲು ಕೀಳುಗಳಿಲ್ಲದೆ, ಸಾಮರಸ್ಯದ ಜೀವನ ನಡೆಸುವ ಅವಶ್ಯಕತೆ ಇತ್ತು. ಅದನ್ನು ಮನಗಂಡ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದರು. ಅದರ ದಿನವಾಗಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ ಎಂದರು.

ಇಂದು ನಾವೆಲ್ಲರು ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಅದರ ಹಿಂದೆ ಅನೇಕ ಮಹನೀಯರ ತ್ಯಾಗ ಬಲಿ  ದಾನದ ಇತಿಹಾಸವಿದೆ. ಈಗಲೂ ಗಡಿಯಲ್ಲಿ ವೀರಯೋಧರು ದೇಶ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ಹೋರಾಡುತ್ತಿದ್ದಾರೆ. ಪ್ರತಿಯೊಬ್ಬರು ಇಂತಹ ಮಹನೀಯರ ಇತಿಹಾಸದ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಅವರ ಕನಸುಗಳನ್ನು ಈಡೇರಿಸಲು ನಾವು ಕಂಕಣಬದ್ಧರಾಗಬೇಕು ಎಂದರು.

ಇದನ್ನೂ ಓದಿ:ಸ್ವೇಚ್ಛಾಚಾರಕ್ಕೆ ಸಂವಿಧಾನ ಬಳಕೆ ಬೇಡ

ಮಠದ ಕಿರಿಯ ಚನ್ನಬಸವ ಸ್ವಾಮಿಗಳು ಉಪನ್ಯಾಸ ನೀಡಿ ಮಾತನಾಡಿ, ಸ್ವಾತಂತ್ರ್ಯದ ನಂತರ ದೇಶದ ಸರ್ವಧರ್ಮಿ  ಯರಿಗೂ ಸಮಾನವಾದ ಸ್ಥಾನಮಾನ ಸಿಗಬೇಕು ಎನ್ನುವದೃಷ್ಟಿಯಿಂದ  ಅಂದಿನ ಸಮಾನ ಮನಸ್ಕರು ಹಿರಿಯರು ಒಂದು ಸಮಿತಿ ರಚನೆ ಮಾಡಿ, 150 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು ಎಂದರು. ಬೆಂಗಳೂರಿನ ತರಕಾರಿ ಮಂಡಿ ಜಗದೀಶ್‌ ಮತ್ತು ಕುಟುಂಬದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಡಳಿತಾಧಿಕಾರಿ ರಂಗನಾಥ್‌, ಶಿಕ್ಷಕರು, ವಿದ್ಯಾರ್ಥಿಗಳ್ದಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next