Advertisement

2023ರೊಳಗೆ ಪ್ರತಿ ಮನೆಗೂ ನಲ್ಲಿ ಸಂಪರ್ಕ

05:50 PM Jan 31, 2021 | Team Udayavani |

ಹುಣಸೂರು: ತಾಲೂಕಿನ ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಜಿ ಗುರುಪುರದಲ್ಲಿ ಭಗೀರಥ ಸಂಸ್ಥೆಯ ಸಹಯೋಗದೊಂದಿಗೆ ಜಲ ಜೀವನ್‌ ಮಿಷನ್‌ ಯೋಜನೆಯಡಿ ಕುಡಿವ ನೀರು ಹಾಗೂ ನೈರ್ಮಲ್ಯ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.

Advertisement

ಈ ವೇಳೆ ಮಾತನಾಡಿದ ಭಗೀರಥ ಸಂಸ್ಥೆಯ ಚೇತನ್‌ ಆರ್‌. ಹೊನ್ನಡಿಕೆ, ಈ ಯೋಜನೆಯಡಿ ಗುರುಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ 2023ರೊಳಗೆ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದರು.

ಇದನ್ನೂ ಓದಿ:ಪೌರಕಾರ್ಮಿಕರಿಗೆ ಊಟ ಬಡಿಸಿದ ಸದಸ್ಯರು

ಭಗೀರಥ ಸಂಸ್ಥೆಯ ಸೋಮುನಾಯ್ಕ, ಪಂಚಾಯ್ತಿ ಕಾರ್ಯದರ್ಶಿ ಚೆಲುವರಾಜು, ಕರವಸೂಲಿಗಾರ ಮಣಿ, ನಿರುಗಂಟಿ ಅಮೀರ್‌ಅಹಮದ್‌ ಖಾನ್‌, ಅಂಗನವಾಡಿಕಾರ್ಯಕರ್ತೆ ವನಿತಾ, ಶ್ರೀಮಾರುತಿ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಯಶೋಧಾ, ಮಂಜುಳಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next