Advertisement

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

04:09 PM Oct 17, 2021 | Team Udayavani |

ಹಾವೇರಿ: ರಾಜ್ಯದ ಉಪ ಚುನಾವಣೆ ಕಣ ರಂಗೇರುತ್ತಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ಲಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸವಾಲೆಸೆದರು.

Advertisement

“ಹಾನಗಲ್ಲಿನಲ್ಲಿ ಉದಾಸಿ ಏನು ಮಾಡಿದ್ದಾರೆ ಎಂದು ಕೇಳುತ್ತಿದ್ದೀರಿ, ಕ್ಷೇತ್ರದ ಹಳ್ಳಿ ಹಳ್ಳಿಗೆ ಹೋಗಿ ನೋಡು ಸಿದ್ರಾಮಣ್ಣ. ನೀರಾವರಿ ಯೋಜನೆ ಮಾಡಿದ್ದು ನಮ್ಮ ಅವಧಿಯಲ್ಲಿ. ಕೋವಿಡ್ ಆಸ್ಪತ್ರೆಗೆ ಹೋಗಿ ನೋಡಿ, ರಾಜ್ಯದಲ್ಲೇ ಅತಿಹೆಚ್ಚು ಬೆಳೆ ವಿಮೆ ಪಡೆಯುತ್ತಿರುವುದು ಹಾನಗಲ್ಲಿನಲ್ಲಿ. ನೀವು ಐದು ವರ್ಷ ಏನು ಕೊಟ್ಟಿದ್ದೀರಿ ಹೇಳಿ” ಎಂದರು.

“ನಿನ್ನೆ ಮೊನ್ನೆ ಕ್ಷೇತ್ರಕ್ಕೆ ಬಂದು ಸಾಧನೆ ಮಾಡಿದ್ದೇವೆ ಎನ್ನುತ್ತೀರಿ. ನಾವು ಇಲ್ಲೇ ಇದ್ದವರು, ಇಲ್ಲಿಯೇ ಜೀವನ, ಇಲ್ಲೇ ಸಾಯುತ್ತೇವೆ. ನಾವು ಮಾತು ತಪ್ಪುವವರಲ್ಲ. ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು. ಕಾಂಗ್ರೆಸ್‌ ಭ್ರಷ್ಟಾಷಾರದ ಗಂಗೋತ್ರಿ” ಎಂದು ಟೀಕಿಸಿದರು.

ಇದನ್ನೂ ಓದಿ:ಉಪಚುನಾಣೆ ತಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ: ಸಿಎಂ ಬಸವರಾಜ್ ಬೊಮ್ಮಾಯಿ

ಮೋದಿ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯ ದೊಡ್ಡವರಾಗುತ್ತೇವೆ ಎಂದುಕೊಂಡಿದ್ದಾರೆ. ಅಚ್ಚೇ ದಿನ್ ನಿಮಗಂತೂ ಬರಲು ಸಾಧ್ಯವಿಲ್ಲ. ಆದರೆ ಜನರಿಗೆ ಅಚ್ಚೇದಿನ ಬಂದಿದೆ ಎಂದರು.

Advertisement

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಗೆ ಮತ ನೀಡಿದರೆ ವ್ಯರ್ಥ. ಕಾಗ್ರೆಸ್ಸಿಗರು ಬೆಂಜ್ ಕಾರ್ ಗಿರಾಕಿಗಳು. ಸೈಕಲ್ ಮೇಲೆ, ಚಕ್ಕಡಿ ಮೇಲೆ ವಿಧಾನಸೌಧಕ್ಕೆ ಬಂದರು ಎಂದ ಸಿಎಂ ಬೊಮ್ಮಾಯಿ, ಈ ಚುನಾವಣೆ ಜಿಲ್ಲೆಯ ಗೌರವದ ಪ್ರಶ್ನೆ. ಸಜ್ಜನರ ಗೆದ್ದರೆ ನಿಮ್ಮ ಮನೆ ಮಗ ಬೊಮ್ಮಾಯಿ ಗೆದ್ದಂತೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next