Advertisement

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

12:59 PM Oct 24, 2021 | Team Udayavani |

ಕಾರ್ಕಳ: ಪುರಸಭೆ  ವ್ಯಾಾಪ್ತಿಯ ನಗರದೊಳಗಿನ  ಹೊಂಡಗುಂಡಿಗಳಿಂದ ಕೂಡಿದ ರಸ್ತೆ ಅಸ್ತವ್ಯಸ್ಥೆ ಖಂಡಿಸಿ ಬ್ಲಾಕ್‌ ಕಾಂಗ್ರೆಸ್, ನಗರ ಕಾಂಗ್ರೆಸ್, ಯುವ ಕಾಂಗ್ರೆಸ್ ವತಿಯಿಂದ ನಗರದ ರಸ್ತೆಯ ಹೊಂಡಗಳಲ್ಲಿ  ಬೈಕ್ ರ‍್ಯಾಲಿ ನಡೆಸಿ, ಗೆದ್ದವರಿಗೆ  ಟ್ರೋಫಿ, ನೋವು ನಿವಾರಣೆಯ ಮೂವ್ ಮುಲಾಮು  ಬಹುಮಾನ ವಿತರಿಸುವ ಮೂಲಕ ವಿನೂತನ ಪ್ರತಿಟನೆ ರವಿವಾರ  ಹಮ್ಮಿಕೊಳ್ಳಲಾಗಿತ್ತು.

Advertisement

ಹಲವು ಮಂದಿ ಸ್ಪರ್ದೆಯಲ್ಲಿ ಬೈಕ್ ನೊಂದಿಗೆ ಭಾಗವಹಿಸಿದರು. ನಗರದೊಳಗಿನ ರಸ್ತೆಗಳು ತೀವೃ ಹದಗೆಟ್ಟಿದ್ದು ಹೊಂಡಗುಂಡಿಗಳಿಂದ ತುಂಬಿ  ನಡೆದು ಹೋಗಲು  ಸಾಧ್ಯವಿಲ್ಲದ ಸ್ಥಿತಿ ನಗರದ ಹೃದಯ ಭಾಗ ಮಂಗಳೂರು ಕಡೆ ತೆರಳುವ ರಸ್ತೆ ಹಾಗೂ ಬಂಡಿಮಠದಿಂದ ಸಾಲ್ಮರದವರೆಗೆ  ನಿರ್ಮಾಣವಾಗಿದ್ದು, ಹಲವು ಸಮಯಗಳಿಂದ ಈ ಸಮಸ್ಯೆಯಿದ್ದರೂ  ಬಿಜೆಪಿ ಆಡಳಿತದ ಪುರಸಭೆ ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ  ಸಮಸ್ಯೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸದೆ ಇರುವುದಕ್ಕೆ  ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಇದಕ್ಕೆಂದು ಆಡಳಿತಕ್ಕೆ , ಜನಪ್ರತಿನಿಧಿಗಳಿಗೆ ಮುಜುಗರ ತರುವ ರೀತಿಯಲ್ಲಿ  ಹೊಂಡದ ರಸ್ತೆಯಲ್ಲಿ ಬೈಕ್ ರ‍್ಯಾಲಿ ಎನ್ನುವ ವಿನೂತನ  ಪ್ರತಿಟನೆಯನ್ನು  ಹಮ್ಮಿಕೊಂಡು ಸಂಬಂದಿಸಿದವರ ಗಮನ ಸೆಳೆಯುವ ಪ್ರಯತ್ನ ನಡೆಸಿತು. ಪ್ರತಿಟನೆಯಲ್ಲಿ  ಬ್ಲಾಕ್, ಕಾಂಗ್ರೆಸ್, ನಗರ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ನವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next