Advertisement

ಮೋದಿ ಅಲೆಯದುರು ಕಾಂಗ್ರೆಸ್‌ ಕೊಚ್ಚಿ ಹೋಗಲಿದೆ: ನಳಿನ್‌ ಕುಮಾರ್‌

12:34 AM Jul 19, 2023 | Team Udayavani |

ಪುತ್ತೂರು: ಕಾಂಗ್ರೆಸ್‌ ಪಕ್ಷವು ಈ ದೇಶದಲ್ಲಿ ಹತ್ತಾರು ಪ್ರಧಾನ ಮಂತ್ರಿಗಳಿಗೆ ಬೆಂಬಲ ಕೊಟ್ಟು ಅವರನ್ನು ಉಚ್ಚಾಟನೆ ಮಾಡಿದೆ. ದೇವೇಗೌಡರನ್ನು ಕೆಳಗಿಳಿಸಿದ್ದು ಕೂಡ ಕಾಂಗ್ರೆಸ್‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಪತ್ರಕರ್ತರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಯಾರನ್ನೂ ಅಧಿಕಾರದಲ್ಲಿ ಇರಲು ಬಿಡಲಿಲ್ಲ. ಪ್ರಸ್ತುತ ಕಾಂಗ್ರೆಸ್‌ಮುಕ್ತ ವಾತಾವರಣ ದೇಶದಲ್ಲಿ ಇದೆ. ಹಾಗಾಗಿ ಬೇರೆ ಬೇರೆ ಪಕ್ಷಗಳ ಜತೆಗೂಡಿ ಮಹಾಮೈತ್ರಿ ಕೂಟ ರಚಿಸುವ ಪ್ರಯತ್ನದಲ್ಲಿದೆ. ಏನೇ ಕಸರತ್ತು ಮಾಡಿದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯ ಎದುರು ಕಾಂಗ್ರೆಸ್‌ ಕೊಚ್ಚಿ ಹೋಗಲಿದೆ ಎಂದರು.

ಕಾಂಗ್ರೆಸ್‌ ಒಂದೇ ಪಾರ್ಟಿಯಾಗಿ ಚುನಾವಣೆಯಲ್ಲಿ ನಿಲ್ಲಲು ಅರ್ಹತೆ ಹೊಂದಿಲ್ಲ. ಹಾಗಾಗಿ ಬೇರೆ-ಬೇರೆ ರೀತಿಯ ನಾಟಕವಾಡಿ ದೇಶದಲ್ಲಿ ಅಧಿಕಾರ ಹಿಡಿಯುವ ಷಡ್ಯಂತ್ರ ಮಾಡುತ್ತಿದೆ. ಕಳೆದ ಬಾರಿ ಈ ಪ್ರಯತ್ನ ಮಾಡಿದ್ದರೂ ಫಲ ಕೊಟ್ಟಿರಲಿಲ್ಲ. ಈ ಬಾರಿಯು ಅಂತಹುದೇ ಫಲಿತಾಂಶ ಎದುರಾಗಲಿದೆ ಎಂದರು.

ಬಿಜೆಪಿ – ಜೆಡಿಎಸ್‌ ಮೈತ್ರಿ ಬಗ್ಗೆ ಮೌನ
ಬಿಜೆಪಿ-ಜೆಡಿಎಸ್‌ ಮೈತ್ರಿ ಕುರಿತ ಪತ್ರಕರ್ತರ ಪ್ರಶ್ನೆಗೆ ನಳಿನ್‌ ಕುಮಾರ್‌ ಉತ್ತರ ನೀಡಲಿಲ್ಲ. ಮೈತ್ರಿ ಸಾಧ್ಯತೆಯನ್ನು ಇಲ್ಲ ಎಂದು ನಿರಾಕರಣೆ ಮಾಡದೆ ಮೌನವಾದರು.

Advertisement

Udayavani is now on Telegram. Click here to join our channel and stay updated with the latest news.

Next