Advertisement

ಸಿಎಂ ಗಾದಿ ತಿಕ್ಕಾಟ : ಜಮೀರ್ ಗೆ ಬಹಿರಂಗ ಹೇಳಿಕೆ ನೀಡದಂತೆ ಕಾಂಗ್ರೆಸ್ ವಾರ್ನಿಂಗ್

05:36 PM Jul 23, 2022 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗಾದಿ ತಿಕ್ಕಾಟ ವಿಚಾರದಲ್ಲಿ ಹೇಳಿಕೆಗಳ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ ಜಮೀರ್ ಅಹಮ್ಮದ್ ಖಾನ್ ಅವರಿಗೆ ಎಚ್ಚರಿಕೆ ನೀಡಿರುವುದಾಗಿ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿಕೆ ನೀಡಿದ್ದಾರೆ.

Advertisement

ಈ ಹಿಂದೆಯೇ ಜಮೀರ್ ಅಹಮ್ಮದ್ ಗೆ ಎಚ್ಚರಿಕೆ ಕೊಟ್ಟಿದ್ದೇವೆ, ಈಗ ಅವರು ಬಾಯಿ ಚಪಲಕ್ಕೆ ಮಾತಾಡುತ್ತಿದ್ದಾರೆ. ಅವರು ಹೇಳಿದ ತಕ್ಷಣ ಸಿದ್ದರಾಮಯ್ಯ ಸಿಎಂ ಆಗುತ್ತಾರಾ ?ಇಲ್ಲವೇ ಡಿ.ಕೆ ಶಿವಕುಮಾರ್ ಗೆ ಅನುಕೂಲವಾಗಲಿದೆಯಾ ?ಮುಸ್ಲಿಂ ಸಮುದಾಯಕ್ಕೂ ಅವಕಾಶ ಅಂತ ಹೇಳಿದ್ದಾರೆ.ಇದು ಪಕ್ಷ ವಿರೋಧಿ ಹೇಳಿಕೆಯಲ್ಲ.ಅವರ ವಿರುದ್ಧ ಕ್ರಮ ಅಂತ ಏನೂ ಇಲ್ಲ.ಮೊದಲು ಸಮಿತಿ ಸಭೆ ಸೇರುತ್ತೇವೆ. ಆ ಬಳಿಕ ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.

ಜಮೀರ್ ಗೆ ಬಹಿರಂಗವಾಗಿ ಮಾತನಾಡದಂತೆ ಸೂಚಿಸುತ್ತೇವೆ.ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಹೈಕಮಾಂಡ್ ನಾಯಕರ ಗಮನಕ್ಕೆ ತರಲಾಗಿದೆ. ಬಹಿರಂಗವಾಗಿ ಹೀಗೆಲ್ಲಾ ಮಾತನಾಡುವುದು ಕನಿಷ್ಠ ಮಟ್ಟದ್ದಾಗುತ್ತದೆ. ಮುಂದೆ ಯಾರೂ ಹೀಗೆ ಮಾತನಾಡಬಾರದು. ಸಭೆ ನಡೆಸಿ ಎಚ್ಚರಿಕೆ ಕೊಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next