Advertisement

ರೈತರಲ್ಲದವರಿಗೂ ಕಿಸಾನ್‌ ಸಮ್ಮಾನ್‌: ಕಾಂಗ್ರೆಸ್‌ ಟ್ವೀಟ್‌

11:55 PM Sep 15, 2022 | Team Udayavani |

ಬೆಂಗಳೂರು: ರೈತರಿಗೆ ನೀಡಬೇಕಿದ್ದ ಕಿಸಾನ್‌ ಸಮ್ಮಾನ್‌, ರೈತರಲ್ಲದವರಿಗೂ ಹಣ ಸಂದಾಯವಾಗಿರುವ ಹಗರಣ ಬೆಳಕಿಗೆ ಬಂದಿದ್ದು, ಸಿಎಜಿ ವರದಿಯಲ್ಲಿ ರಾಜ್ಯದ ಶೇ.14ರಷ್ಟು ರೈತರಿಗೆ  92 ಕೋಟಿ ರೂ. ತಲುಪಿಯೇ ಇಲ್ಲ ಎಂದು ತಿಳಿದು ಬಂದಿದೆ. ಈ ಹಣ ಎಲ್ಲಿ ಹೋಯಿತು? ಇದರಲ್ಲಿಯೂ ಶೇ.40 ಕಡಿತಗೊಳಿಸಲಾಗಿದೆಯಾ ಎಂದು ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮೂಲಕ ಪ್ರಶ್ನಿಸಿದೆ.

Advertisement

“ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ’ ಎಂಬಂತೆ 40 ಪರ್ಸೆಂಟ್‌ ಕಮಿಷನ್‌ ಲೂಟಿಯ ಚಾಳಿಯನ್ನು ಅಧಿಕಾರಿಗಳು, ಸರ್ಕಾರಿ ನೌಕರರು ಪಾಲಿಸುತ್ತಿದ್ದಾರೆ. ಇದರಿಂದಾಗಿ ಬಿಜೆಪಿ ಆಡಳಿತದಲ್ಲಿ ಲಂಚವು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆ ಎಂದು ಟೀಕಿಸಲಾಗಿದೆ. ಜನರ ಪ್ರಾಣ ಹಿಂಡುವ ನಿಮ್ಮ ಇಲಾಖೆಯ ಲಂಚಾವತಾರ ತಡೆಯುವುದಿಲ್ಲವೇ? ಅಥವಾ ನೀವೂ ಪಾಲುದಾರರೇ? ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ ಕುಮಾರ್‌ ಅವರಿಗೆ ಪ್ರಶ್ನಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next