Advertisement

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

06:51 PM Apr 20, 2024 | Team Udayavani |

ಬೆಂಗಳೂರು: ‘ಕಾಂಗ್ರೆಸ್ ತೆರಿಗೆ ನಗರ ಬೆಂಗಳೂರನ್ನು ಟ್ಯಾಂಕರ್ ನಗರವನ್ನಾಗಿ ಮಾಡಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಕೇವಲ ಭ್ರಷ್ಟಾಚಾರದ ಮೇಲೆ ಕೇಂದ್ರೀಕೃತವಾಗಿದೆಯೇ ಹೊರತು ಬೆಂಗಳೂರಿನ ಕುಡಿಯುವ ನೀರು ಸೇರಿ ಇತರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಿಡಿ ಕಾರಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಸಂಜೆ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಯೋಜನೆಗಳು ಮಾತ್ರ ವೇಗವಾಗಿ ಸಾಗುತ್ತಿವೆ. 2014ರಲ್ಲಿ ನಮ್ಮ ಮೆಟ್ರೋದ ನೆಟ್‌ವರ್ಕ್ ಕೇವಲ 17 ಕಿಮೀ ಇತ್ತು, ಈಗ ಅದು 70 ಕಿಮೀಗಿಂತ ಹೆಚ್ಚಿದೆ. ರೇಷ್ಮೆ ಕೃಷಿ ಪುನರುಜ್ಜೀವನ ಮತ್ತು ಅಭಿವೃದ್ಧಿಗಾಗಿ ಎನ್‌ಡಿಎ ಸರಕಾರ ಕೆಲಸ ಮಾಡುತ್ತಿದೆ. ಕರ್ನಾಟಕದ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ.ರಾಜ್ಯದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ 25 ರಿಂದ 49 ಕ್ಕೆ ಏರಿದೆ. ಹಿಂದಿನ ಸರ್ಕಾರದ ದುರಾಡಳಿತದಲ್ಲಿ ಜನರು ಎಲ್ಲ ನಿರೀಕ್ಷೆಗಳನ್ನು ಕಳೆದುಕೊಂಡಿದ್ದರು.ಆದರೆ ಎನ್‌ಡಿಎ ಸರಕಾರದ ಅಡಿಯಲ್ಲಿ, ಮೋದಿಯ ಗ್ಯಾರಂಟಿ ಸರಕಾರದ ಮೇಲಿನ ಜನರ ನಂಬಿಕೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಿದೆ” ಎಂದರು.

‘ನಿಮ್ಮ ಕನಸುಗಳನ್ನು ನನಸು ಮಾಡಿ, ಜೆಡಿಎಸ್ ಮತ್ತು ಬಿಜೆಪಿ ಜತೆಯಾಗಿವೆ. ಆದ್ದರಿಂದ, ನಿಮ್ಮ ಕನಸುಗಳು ನನ್ನ ಸಂಕಲ್ಪ ಎಂದು ನಾನು ಖಾತರಿಪಡಿಸುತ್ತೇನೆ. ನನ್ನ ಜೀವನ ನಿಮಗೆ ಮತ್ತು ದೇಶಕ್ಕೆ ಮುಡಿಪಾಗಿದೆ. ನಾನು 2047 ಕ್ಕೆ 24/7 ಭರವಸೆ ನೀಡುತ್ತೇನೆ’ ಎಂದರು.

‘ಬೆಂಗಳೂರು ಯುವ ಶಕ್ತಿ ಮತ್ತು ಯುವ ಪ್ರತಿಭೆಗಳ ಶಕ್ತಿ ಕೇಂದ್ರವಾಗಿದೆ. ಆದರೆ, ಕಾಂಗ್ರೆಸ್ ಮತ್ತು ಇಂಡಿ ಮೈತ್ರಿ ಕೂಟದ ಪಕ್ಷಗಳು ತಂತ್ರಜ್ಞಾನ ವಿರೋಧಿಗಳು.ಇಂದು ಇಡೀ ವಿಶ್ವವೇ ಡಿಜಿಟಲ್ ಇಂಡಿಯಾ ಮತ್ತು ಫಿನ್‌ಟೆಕ್ ಅನ್ನು ಕೊಂಡಾಡುತ್ತಿದೆ. ಆದರೆ, ಕಾಂಗ್ರೆಸ್ ಆಧಾರ್‌ಗೆ ವಿರೋಧ ವ್ಯಕ್ತಪಡಿಸಿದೆ ಎಂಬುದನ್ನು ಮರೆಯಬೇಡಿ. ಜನ್ ಧನ್ ಖಾತೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಅವರು ಡಿಜಿಟಲ್ ಪಾವತಿಗಳನ್ನು ಅಪಹಾಸ್ಯ ಮಾಡಿದ್ದರು’ ಎಂದರು.

‘2014 ಕ್ಕಿಂತ ಮೊದಲು, ಪರೋಕ್ಷ ತೆರಿಗೆಗಳ ದಂಡೇ ಇತ್ತು. ಆದರೆ, ಜಿಎಸ್‌ಟಿ ಜಾರಿಯಾದ ನಂತರ ಪರೋಕ್ಷ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಇದು ನಿಮಗೆ ಸಾವಿರಾರು ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ. ಸುಮಾರು 400 ರೂ.ಗೆ ಸಿಗುತ್ತಿದ್ದ ಎಲ್ ಇಡಿ ಬಲ್ಬ್ ಈಗ ಕೇವಲ 40 ರೂ.ಗೆ ಸಿಗುತ್ತಿದೆ’ ಎಂದರು.

Advertisement

‘2014 ಮತ್ತು 2019 ರಲ್ಲಿ, ನೀವು ದಾಖಲೆಯ ಮತಗಳಿಂದ ನಮ್ಮನ್ನು ಗೆಲ್ಲಿಸುವ ಮೂಲಕ ಬಲವಾದ ಸರಕಾರವನ್ನು ರಚಿಸಲು ಸಹಾಯ ಮಾಡಿದ್ದೀರಿ. ಇದು ಭಾರತವನ್ನು ಬಲಿಷ್ಠಗೊಳಿಸಿತು. ಭಾರತವು ಐದು ಪ್ರಬಲ ಆರ್ಥಿಕತೆಗಳಲ್ಲಿ ಒಂದಾಗಿದೆ. ಇಂದು ಜಗತ್ತಿನ ಎಲ್ಲ ದೇಶಗಳೂ ಭಾರತದೊಂದಿಗೆ ಬೆರೆಯಲು ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಿವೆ. ಭಾರತ ದಾಖಲೆ ಪ್ರಮಾಣದಲ್ಲಿ ರಫ್ತು ಮತ್ತು ಉತ್ಪಾದನೆ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ನೀವು ಈ ಪರಿವರ್ತನೆಗೆ ಸಾಕ್ಷಿಯಾಗಿದ್ದೀರಿ.ಈ ರೂಪಾಂತರವು ನಿಮ್ಮ ಒಂದು ಮತದಿಂದ ಸಾಧ್ಯವಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next