Advertisement

ಇಂದು ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್‌ನಿಂದ ಬೃಹತ್‌ ರ್‍ಯಾಲಿ

10:19 PM Sep 03, 2022 | Team Udayavani |

ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ನಿಯಮಗಳನ್ನು ವಿರೋಧಿಸಿ ಕಾಂಗ್ರೆಸ್‌ ಭಾನುವಾರ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ರ್‍ಯಾಲಿ ನಡೆಸಲಿದೆ.

Advertisement

ಈ “ಮೆಹಂಹಾಯಿ ಪರ್‌ ಹಲ್ಲಾ ಬೋಲ್‌’ ರ್‍ಯಾಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ.

ಶನಿವಾರ ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ಸುದ್ದಿಗೋಷ್ಠಿ ನಡೆಸಿದ್ದು, “ಈ ಸರ್ಕಾರಕ್ಕೆ ಸ್ವಲ್ಪವೂ ಸೂಕ್ಷ್ಮತೆಯಿಲ್ಲ. ಸರ್ಕಾರ ಶಾಸಕರನ್ನು ಕೊಂಡುಕೊಂಡು ವಿರೋಧ ಪಕ್ಷಗಳ ಅಧಿಕಾರ ಕಿತ್ತುಕೊಳ್ಳುವುದೊಂದನ್ನೇ ಮಾಡುತ್ತಿದೆ. ಅಗತ್ಯ ವಸ್ತುಗಳಿಗೆ 2014ರಲ್ಲಿದ್ದ ಬೆಲೆಗೂ, 2022ರಲ್ಲಿರುವ ಬೆಲೆಗೂ ಹೋಲಿಕೆ ಮಾಡಿ ನೋಡಬೇಕು. ಸರ್ಕಾರದ ಈ ನಡೆಯನ್ನು ವಿರೋಧಿಸುವುದನ್ನು ನಾವು ಎಂದಿಗೂ ನಿಲ್ಲಿಸುವುದಿಲ್ಲ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next