Advertisement

ಕಾಂಗ್ರೆಸ್ ಕೆಟ್ಟ ರಾಜನೀತಿ ದೇಶಕ್ಕೆ ಅಪಾಯ: ಸಿಎಎ ಕುರಿತು ಬಹಿರಂಗ ಚರ್ಚೆಗೆ ಸಿದ್ದ !

10:07 AM Jan 11, 2020 | Mithun PG |

ಚಿಕ್ಕಬಳ್ಳಾಪುರ: ಕಾಂಗ್ರೆಸ್ ನ ಕೆಟ್ಟ ರಾಜನೀತಿ ದೇಶವನ್ನು ಅಭದ್ರತೆಗೆ ತಳ್ಳುತ್ತಿದ್ದು ಪೌರತ್ವ ವಿರೋಧಿ ಹೋರಾಟದ ವೇಳೆ ನಡೆಯುತ್ತಿರುವ ಗಲಭೆ, ಅಹಿತಕರ ಘಟನೆಗಳ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆಯೆಂದು ಸಂಸದೆ‌ ಶೋಭಾ ಕರಂದಾಜ್ಞೆ ಆರೋಪಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ ಸಿಎಎ ಹಾಗೂ ಎನ್ ಆರ್ ಸಿ ಕಾಯ್ದೆಗಳ ಪರ ಜನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಭಾಗವಹಿಸಿ‌ಅವರು ಮಾತನಾಡಿದರು. ದೇಶದಲ್ಲಿ ವೈಚಾರಿಕತೆ ಕುರಿತು ಎಷ್ಷೇ ಚರ್ಚೆ ನಡೆಯಲಿ. ಆದರೆ ಸಂಘರ್ಷ, ಗಲಭೆ ನಡೆಸುವುದು ಸರಿಯಲ್ಲ. ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರನ್ನು ಪೌರತ್ವ ಕಾಯ್ದೆ ಹೆಸರಲ್ಲಿ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುಲು ಹೊರಟಿದೆ ಅದರೆ ಅದು ಸಾಧ್ಯವಿಲ್ಲ ಎಂದರು.

ಪೌರತ್ವ ಕಾಯ್ದೆಯಲ್ಲಿ ಯಾವುದೇ ಗೊಂದಲ ಇಲ್ಲ. ಈ ನೆಲದಲ್ಲಿ ಹುಟ್ಟಿದ ಯಾರಿಗೂ ಪೌರತ್ವದಿಂದ ತೊಂದರೆ ಅಗುವುದಿಲ್ಲ. ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ದರಿದ್ದೇವೆ. ಕಾಂಗ್ರೆಸ್ ನಾಯಕರು ಬಹಿರಂಗ ಚರ್ಚೆ ಬರಲು ಸಿದ್ದರೇ ಎಂದು ಅವರು ಪ್ರಶ್ನಿಸಿದರು. ದೇಶದ ವಿಶ್ವವಿದ್ಯಾಲಯಗಳಲ್ಲಿ ದೇಶ ದ್ರೋಹಿಗಳು ಇದ್ದರೆ ಅವರನ್ಬು ಪತ್ತೆ ಮಾಡುವ ಕಾರ್ಯ ಮಾಡಬೇಕೆಂದು ತಿಳಿಸಿದರು .

ಈ ಸಂದರ್ಭದಲ್ಲಿ ಶಾಸಕ ಡಾ.ಕೆ.ಸುಧಾಕರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next