Advertisement

ಬಿಜೆಪಿ ಸ್ಥಿತಿ “ಮನೆಯೊಂದು ಮುನ್ನೂರು ಬಾಗಿಲು’: ಕಾಂಗ್ರೆಸ್‌

09:29 PM Nov 10, 2022 | Team Udayavani |

ಬೆಂಗಳೂರು: ಬಿಜೆಪಿ ಸ್ಥಿತಿ  ಈಗ “ಮನೆಯೊಂದು ಮುನ್ನೂರು ಬಾಗಿಲು’ ಎಂಬಂತಾಗಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಲೇವಡಿ ಮಾಡಿದೆ.

Advertisement

ಖಾಲಿ ಕುರ್ಚಿ ದರ್ಶನ ಪಡೆದ ನಳಿನ್‌ಕುಮಾರ್‌ ಕಟೀಲು ಅನಾರೋಗ್ಯ ನೆಪವೊಡ್ಡಿ ಜನಸಂಕಟ ಯಾತ್ರೆಗೆ ಗೈರು, ಮಂತ್ರಿ ಸ್ಥಾನ ಸಿಗದೆ ಮುನಿಸಿಕೊಂಡ ರಮೇಶ್‌ ಜಾರಕಿಹೊಳಿ ಗೈರು. ಅಂದು ಅತೃಪ್ತರ ನೇತೃತ್ವ ವಹಿಸಿದ್ದವರಿಗೆ  ಬಿಜೆಪಿಯ ದ್ರೋಹದ ದರ್ಶನವಾಗಿದೆ. ಇಂದು ಮತ್ತೆ ಅತೃಪ್ತಿಯಾಗಿದೆ ಎಂದು ಹೇಳಿದೆ.

ಬಿಜೆಪಿಯನ್ನು ಜನ ತಿರಸ್ಕರಿಸುತ್ತಿದ್ದಾರೆ ಎಂಬ ಸಂಗತಿ ಯಡಿಯೂರಪ್ಪ ಅವರಿಗೆ ತಿಳಿದು ಹೋಗಿದೆ. ಸರಕಾರದ ದುರಾಡಳಿತ, ಅಭಿವೃದ್ಧಿ ಶೂನ್ಯತೆ , ಸಿಗದ ಅನುದಾನಗಳಿಂದ ಈಗಾಗಲೇ ಸೋಲಿನ ಸೂಚನೆ ಸಿಕ್ಕಿರುವ ಬಿಜೆಪಿ ಶಾಸಕರು ಸ್ಪರ್ಧಿಸದಿದ್ದರೆ ಹಣ ಉಳಿಯಲಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಜನವಿರೋಧಿ ಬಿಜೆಪಿ ಕರ್ನಾಟಕಲ್ಲಿ ಧೂಳೀಪಟವಾಗುವುದು ನಿಶ್ಚಿತ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next