Advertisement

ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಟ್ವಿಟರ್‌ನಲ್ಲಿ ವಾಗ್ಧಾಳಿ

11:13 PM Sep 27, 2022 | Team Udayavani |

ಬೆಂಗಳೂರು: “ಯಾರದ್ದು ಡರ್ಟಿ ಪಾಲಿಟಿಕ್ಸ್‌ “ಪೇ ಸಿಎಂ’ ಬಸವರಾಜ ಬೊಮ್ಮಾಯಿ ಅವರೇ’ ಎಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ವಾಗ್ಧಾಳಿ ನಡೆಸಿದೆ.

Advertisement

ಸರಣಿ ಟ್ವಿಟ್‌ ಮಾಡಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ತಮ್ಮ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳನ್ನು ಜನಮಾನಸದಿಂದ ಮರೆಮಾಚಲು ವಾರಕ್ಕೊಂದು ಕೋಮು ವಿವಾದ ಸೃಷ್ಟಿಸಿ ಸಮಾಜವನ್ನು ಒಡೆದಿದ್ದು, ಪ್ರಜಾಪ್ರಭುತ್ವ ಹಾಗೂ ಸಂವಿಧಾನಗಳ ಆಶಯಕ್ಕೆ ವಿರುದ್ಧವಾದ ಶಕ್ತಿಗಳಿಗೆ ‘ಮೌನ’ದಿಂದ ಬೆಂಬಲಿಸಿದ್ದು ಬಿಜೆಪಿಯ ಡರ್ಟಿ ಪಾಲಿಟಿಕ್ಸ್‌ ಅಲ್ಲವೆ ಎಂದು ಕುಟುಕಿದೆ.

ಚೀತಾಗಳಿಂದ ಭಾರತೀಯರು ಸಂತಸಗೊಂಡಿದ್ದಾರಂತೆ, ಚೀತಾಗಳಿಗೆ ಹೆಸರಿಡಬೇಕಂತೆ, ಒಳ್ಳೆ ಹೆಸರು ಸೂಚಿಸಿದವರಿಗೆ ಬಹುಮಾನವಂತೆ. ನರೇಂದ್ರ ಮೋದಿ ಅವರು ಪ್ರಧಾನಿಯೋ, ವೇದಿಕೆಯಲ್ಲಿ ರಂಜಿಸುವ ವಿದೂಷಕನೋ, ತಿಳಿಯದಾಗಿದೆ ಎಂದು ಟೀಕಿಸಿದೆ.

ವಿಕಾಸ್‌, ಅಚ್ಛೆ ದಿನ್‌, ವಿಶ್ವಗುರು, 5 ಟ್ರಿಲಿಯನ್‌ ಎಕಾನಮಿ, 15 ಲ್ಯಾಕ್ಸ್‌, ರಾಜಕೀಯ ಹಿತಾಸಕ್ತಿಗೊಸ್ಕರ ಹಿಜಾಬ್‌ ಹೆಸರಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಕಿತ್ತುಕೊಂಡಿದ್ದು , ಸಿಎಂ ಹುದ್ದೆಯ ಜವಾಬ್ದಾರಿ ಮರೆತು ಆಕ್ಷನ್‌ಗೆ ರಿಯಕ್ಷನ್‌ ಸಹಜ ಎನ್ನುವ ಮೂಲಕ ಸಮಾಜಘಾತುಕರಿಗೆ ಬೆಂಬಲಿಸಿದ್ದು , ಕೋಮು ಕಲಹಗಳನ್ನು ಹಬ್ಬಿಸಿ ಕಣ್ಮುಚ್ಚಿ ಕುಳಿತಿದ್ದು , ಇದು ಬಿಜೆಪಿಯ ಡಾರ್ಟಿ ಪಾಲಿಟಿಕ್ಸ್‌ ಅಲ್ಲವೆ ಪೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಎಂದು ವಾಗ್ಧಾಳಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next