Advertisement

Congress Protest; ರಾಜ್ಯಪಾಲರು ಬಿಜೆಪಿ ಏಜೆಂಟ್‌ ಆಗಿದ್ದಾರೆ: ಬೇಳೂರು ಗೋಪಾಲಕೃಷ್ಣ

03:28 PM Aug 19, 2024 | keerthan |

ಶಿವಮೊಗ್ಗ: ರಾಜ್ಯಪಾಲರ ನಡೆಯಿಂದ ಪ್ರಜಾಪ್ರಭುತ್ವ ಕೊಲೆ, ಸಂವಿಧಾನ ಕೊಲೆಯಾಗಿದೆ. ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವುದು ರಾಜ್ಯಪಾಲರಿಗೆ ಗೌರವ ತರುವುದಿಲ್ಲ. ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ರಾಜ್ಯಪಾಲರಿಗೆ ನಾನು ಧಿಕ್ಕಾರ ಹೇಳುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Advertisement

ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಜ್ಯಪಾಲರೇ ಯಾವ ಉದ್ದೇಶ ಹೀಗೆ ಮಾಡುತ್ತಿದ್ದೀರಾ ನೀವು? ಕುಮಾರಸ್ವಾಮಿ, ನಿರಾಣಿ, ಶಶಿಕಲಾ ಜೊಲ್ಲೆ, ಜರ್ನಾದನ ರೆಡ್ಡಿ ವಿರುದ್ಧ ಯಾಕೆ ನೀವು ಕ್ರಮ ತೆಗೆದುಕೊಂಡಿಲ್ಲ. ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡಲು ನಿಮಗೆ ಹಕ್ಕಿಲ್ಲ. ಮೋದಿಯವರ ಪರವಾಗಿ, ಕುಮಾರಸ್ವಾಮಿ, ಬಿಜೆಪಿ ಪರವಾಗಿ ರಾಜ್ಯಪಾಲರೇ ನೀವು ಕೆಲಸ ಮಾಡುತ್ತಿದ್ದೀರಿ. ರಾಜ್ಯಪಾಲರೇ ನಿಮಗೆ ನಾಚಿಕೆ ಆಗಬೇಕು ಎಂದರು.

ಯಾವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೀರಿ. 136 ಸೀಟ್ ಗೆದ್ದಿದ್ದೀವಿ, ಬಿಜೆಪಿಯವರು ಏನು ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ತಾಕತ್ತು, ಧಮ್ ಇದೆಯಾ? ನಾವು 136 ಶಾಸಕರು ಸಿದ್ದರಾಮಯ್ಯ ಪರವಿದ್ದೇವೆ. ಯಾವ ಕಾರಣಕ್ಕೂ ನಮ್ಮ ಸರ್ಕಾರ ಬೀಳುವುದಕ್ಕೆ ಆಗುವುದಿಲ್ಲ ಎಂದು ಬೇಳೂರು ಹೇಳಿದರು.

ಪಿಎಸ್ ಐ ಹಗರಣ ತನಿಖೆ ಮಾಡಿದರೆ ವಿಜಯೇಂದ್ರ ಜೈಲಿಗೆ ಹೋಗುತ್ತಾರೆ. ಯಡಿಯೂರಪ್ಪ ಹಾಗೂ ಅವರ ಮಕ್ಕಳ ಜೈಲಿಗೆ ಹೋಗುತ್ತಿದ್ದರು. ವಿಜಯೇಂದ್ರ ನೀವು ಜೈಲಿಗೆ ಹೋಗುತ್ತೀರಾ, ನಿಮ್ಮ ಅಣ್ಣನೂ ಜೈಲಿಗೆ ಹೋಗುತ್ತಾರೆ, ನೋಡುತ್ತಿರು. ನಿಮ್ಮ ಹಗರಣವನ್ನು ತೆಗೆಯುತ್ತೀವೆ, ನಿಮ್ಮ ಹಗರಣ ಬಿಡುವುದಿಲ್ಲ. ರಾಜ್ಯಪಾಲರ ಮನೆಗೆ ಮುತ್ತಿಗೆ ಹಾಕುತ್ತೇವೆ, ಬಿಡುವುದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next