Advertisement

ಕಾಂಗ್ರೆಸ್‌ 2024ರ ಚುನಾವಣೆ ಗೆದ್ದ ಭ್ರಮೆಯಲ್ಲಿದೆ: ಮಾಜಿ ಸಚಿವ ಮುಕ್ತಾರ್‌ ಅಬ್ಬಾಸ್ ಟೀಕೆ

08:24 AM May 16, 2023 | Team Udayavani |

ಮುಂಬಯಿ/ಕೋಲ್ಕತಾ: ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆ ಸ್‌ ಗೆದ್ದ ಅನಂತರ 2024ರ ಲೋಕಸಭೆ ಚುನಾವಣೆಯಲ್ಲಿ ಕೂಡ ಜಯಭೇರಿ ಬಾರಿಸುವ ಭ್ರಮೆಯಲ್ಲಿ ಇದೆ ಎಂದು ಬಿಜೆಪಿ ಹಿರಿಯ ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ ವ್ಯಂಗ್ಯವಾಡಿದ್ದಾರೆ.

Advertisement

ಮುಂಬಯಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಮತ್ತು ಇತರ ವಿಪಕ್ಷ­ಗಳು 2018ರ ಭ್ರಮೆಯಲ್ಲಿಯೇ ಇವೆ. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಜತೆಗೆ ಜೆಡಿಎಸ್‌ ಸೇರಿ ಸರಕಾರ ರಚಿಸಿತ್ತು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕೂಡ ಗೆಲ್ಲುವ ಭ್ರಮೆ ಹೊಂದಿತ್ತು. ಆದರೆ ಅದು ಕೈಗೂಡಲಿಲ್ಲ. ಈಗಲೂ ಅದೇ ಭ್ರಮೆಯಲ್ಲಿದೆ ಎಂದು ವ್ಯಂಗ್ಯ ವಾಡಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ 2024 ಚುನಾವಣೆಯಲ್ಲಿ ಜಯ ಸಾಧಿಸಲಿದೆ ಎಂಬ ಭ್ರಮೆಯಲ್ಲಿದೆ ಎಂದರು.

ಸಮಿತಿ ರಚನೆ: “2024ರ ಲೋಕಸಭೆ ಚುನಾವಣೆಯಲ್ಲಿ ಅಭ್ಯ ರ್ಥಿಗಳನ್ನು ಅಂತಿಮ­ಗೊಳಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲು ಮಹಾ ವಿಕಾಸ್‌ ಅಘಾಡಿ ನಾಯಕರು ಯೋಚಿಸಿದ್ದಾರೆ. ಸಮಿತಿ ಯಲ್ಲಿ ಮಿತ್ರ ಪಕ್ಷಗಳ ತಲಾ ಇಬ್ಬರು ಸದಸ್ಯರು ಇರಲಿದ್ದಾರೆ, ಎಂದು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ತಿಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠವಾಗಿ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್‌ ಅದನ್ನು ಬೆಂಬಲಿಸಲಿದೆ. ಇದೇ ರೀತಿ ಇತರೆ ಮಿತ್ರ ಪಕ್ಷಗಳನ್ನು ಕಾಂಗ್ರೆಸ್‌ ಬೆಂಬಲಿಸಬೇಕಿದೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next