Advertisement

ವೈದ್ಯಕೀಯ ಸೇವೆಯ ಸಹಾಯಹಸ್ತ ಚಾಚಲು ಕಾಂಗ್ರೆಸ್‌ ಸಿದ್ಧತೆ

01:46 PM Apr 24, 2021 | Team Udayavani |

ಬೆಂಗಳೂರು: ಕೋವಿಡ್ ಎರಡನೇ ಅಲೆ ನಿರ್ವಹಣೆ ವಿಚಾರದಲ್ಲಿ ಟೀಕೆಗಳಿಗಿಂತ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಬಾಧಿತರಿಗೆ ಸಹಾಯಹಸ್ತ ಚಾಚುವಂತೆ ಅಖೀಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ನಿರ್ದೆಶನದ ಮೇರೆಗೆ ಕೆಪಿಸಿಸಿ ವೈದ್ಯಕೀಯ ತಂಡ ರಚಿಸಲು ಸಜ್ಜಾಗುತ್ತಿದೆ.

Advertisement

ಕೋವಿಡ್ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಗಮನಹರಿಸುವುದರ ಜತೆಗೆ ಹೊಣೆ ಗಾರಿಕೆ ನಿಭಾಯಿಸುವಂತಹ ಕಾರ್ಯದಲ್ಲಿ ತೊಡಗಬೇಕೆಂದು ಎಐಸಿಸಿರಾಜ್ಯ ಘಟಕಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 100 ಮಂದಿ ತಜ್ಞ ವೈದ್ಯರು ಹಾಗೂ 1,000 ಸೇವಾದಳಕಾರ್ಯಕರ್ತರನ್ನೊಳಗೊಂಡ ತಂಡ ರಚಿಸಿ ಟೆಲಿ ಮೆಡಿಸಿನ್‌ ಸೇವೆ ಒದಗಿಸಲು ರೂಪು-ರೇಷೆ ಸಿದ್ಧ ಪಡಿಸುತ್ತಿದೆ.

ಮೊದಲ ಹಂತದಲ್ಲಿ ಕೊರೊನಾ ಬಾಧಿತರಿಗೆ ಅವರ ಸುತ್ತಮುತ್ತಲ ಪ್ರದೇಶದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ವಿವರ, ಸಂಪರ್ಕಿಸಬೇಕಾದ ಆರೋಗ್ಯ ಇಲಾಖೆಯ ಸಹಾಯವಾಣಿ ಕೇಂದ್ರಗಳ ಸಂಖ್ಯೆ ನೀಡುವುದು ಹೀಗೆ ಸಮನ್ವಯತೆ ಸಾಧಿಸುವುದು.

ಎರಡನೇ ಹಂತದಲ್ಲಿ ಕಡಿಮೆ ಗುಣಲಕ್ಷಣಗಳು ಇರುವವರು ಹೋಂ ಕ್ವಾರಂಟೈನ್‌ನಲ್ಲಿದ್ದರೆ ಅವರಿಗೆ ಟೆಲಿ ಮೆಡಿಸನ್‌ ವ್ಯವಸ್ಥೆ. ಕುಟುಂಬ ವರ್ಗದವರಿಗೆ ಕಾಲ ಕಾಲಕ್ಕೆ ಯಾವ ರೀತಿ ಕೊರೊನಾಪೀಡಿತರನ್ನು ನೋಡಿಕೊಳ್ಳಬೇಕು ಎಂಬ ಬಗ್ಗೆ ಸಲಹೆ ಸೂಚನೆ ನೀಡುವುದು. ಮೂರನೇ ಹಂತದಲ್ಲಿ ಸಹಾಯ ವಾಣಿ ಕೇಂದ್ರ ಸ್ಥಾಪಿಸಿ ಸಾರ್ವಜನಿಕರಿಂದ ಕೊರೊನಾಗೆ ಸಂಬಂಧಿಸಿದಂತೆ ಕರೆ ಸ್ವೀಕರಿಸಿ ತಕ್ಷಣ ಬೇಕಾದ ನೆರವು, ಚಿಕಿತ್ಸೆಗೆ ಮಾರ್ಗದರ್ಶನ ಮಾಡುವುದು ಮುಖ್ಯ ಉದ್ದೇಶ ಎಂದು ಹೇಳಲಾಗಿದೆ.

ಸೂಚನೆ: ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್‌ ಅವರು ಕೆಪಿಸಿಸಿ ವೈದ್ಯಕೀಯ ಘಟಕದ ಪದಾಧಿಕಾರಿಗಳ ಜತೆ ಸಭೆ ನಡೆಸಿ ತಜ್ಞ ವೈದ್ಯರ ಪಟ್ಟಿ ನೀಡುವಂತೆ ಸೂಚಿಸಿ ದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಕಲಬು ರಗಿ,ಬೀದರ್‌, ಶಿವಮೊಗ್ಗ, ಬಳ್ಳಾರಿ, ತುಮಕೂರು ಸೇರಿ ಪ್ರಮುಖ ನಗರಗಳಲ್ಲಿ ಸಾಧ್ಯವಾದರೆ ಜಿಲ್ಲಾ ಕಾಂಗ್ರೆಸ್‌ ಕಚೇರಿ ಗಳಲ್ಲಿ ವೈದ್ಯರಸಹಿತ ಸಹಾಯವಾಣಿ ಪ್ರಾರಂಭಿಸುವಂತೆಯೂ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ತಾಲೂಕು ಕೇಂದ್ರಗಳಲ್ಲಿ ಆಸ್ಪತ್ರೆಗಳ ಸುಸಜ್ಜಿತ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಇದರ ಬಗ್ಗೆ ತಾಲೂಕು ಹಾಗೂ ಜಿಲ್ಲಾಕಾಂಗ್ರೆಸ್‌ ಸಮಿತಿ. ಪ್ರಮುಖವಾಗಿ ಯುವ ಕಾಂಗ್ರೆಸ್‌ ಹೆಚ್ಚು ಗಮನಹರಿಸಬೇಕು ಎಂದು ನಿರ್ದೇಶನ ನೀಡಲಾಗಿದ್ದು, ಜಿಲ್ಲಾಮತ್ತು ತಾಲೂಕು ಮಟ್ಟದಲ್ಲಿ ಒಂದೊಂದು ತಂಡ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಣ್ಣ ಸಣ್ಣ ಆಡಿಯೊ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸಿ. ಅವಕಾಶ ಇದ್ದ ಕಡೆ ಸ್ಯಾನಿಟೈಸರ್‌,ಮಾಸ್ಕ್ ವಿತರಿಸಿ. ವೈದ್ಯರ ಘಟಕ ಹಾಗೂ ಯುವ ಘಟಕಕೈಗೊಳ್ಳುವ ಕಾರ್ಯಕ್ರಮಗಳನ್ನು ಸಣ್ಣ ವರದಿ ರೂಪದಲ್ಲಿ ಕೆಪಿಸಿಸಿಗೆ ರವಾನಿಸಿ ಎಂದು ತಿಳಿಸಲಾಗಿದೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌, ಮಾಜಿ ಸಚಿವ ಕೃಷ್ಣ ಬೈರೇಗೌಡ ಸಹಿತ ಕಾಂಗ್ರೆಸ್‌ ಶಾಸಕರು ರೈತರ ಹೊಲಗಳಿಗೆ ಹೋಗಿ ಹಣ್ಣು, ತರಕಾರಿ ಖರೀದಿಸಿ ಬಡವರಿಗೆ ಹಂಚಿಕೆ ಮಾಡಿದ್ದರು. ಈ ವರ್ಷ ವೈದ್ಯಕೀಯ ನೆರವು

ಕೆಪಿಸಿಸಿ ವತಿಯಿಂದ ಕೋವಿಡ್ಪೀಡಿತರು ಹಾಗೂ ಕುಟುಂಬ ವರ್ಗದವರಿಗೆ ನೆರವಾಗಲು ವಿಶೇಷ ವೈದ್ಯರತಂಡ ರಚಿಸಲಾಗುತ್ತಿದೆ. ಸಹಾಯವಾಣಿ ಕೇಂದ್ರಗಳನ್ನೂ ತೆರೆಯಲು ಸಿದ್ಧತೆ ನಡೆಸಲಾಗಿದೆ .ವೈದ್ಯರ ಘಟಕ ಹಾಗೂ ಯುವ ಕಾಂಗ್ರೆಸ್‌ ಘಟಕಕ್ಕೆ ಇದರ ಜವಾಬ್ದಾರಿ ನೀಡಲಾಗುವುದು. ಸಲೀಂ ಅಹಮದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

 

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next