Advertisement

ಪೊಲೀಸರಿಂದ ಹಲ್ಲೆ: ಕೇರಳ ಸಂಸದರ ಆರೋಪ

09:42 PM Mar 24, 2022 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಪೊಲೀಸರು, ಪ್ರತಿಭಟನಾನಿರತರಾಗಿದ್ದ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೇರಳದ ಯುನೈಟೆಡ್‌ ಡೆಮೋಕ್ರಟಿಕ್‌ ಫ್ರಂಟ್‌(ಯುಡಿಎಫ್)ನ ಸಂಸದರು ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್‌ ಸಂಸದ ಕೆ. ಸುರೇಶ್‌, “ಕೆ-ರೈಲು-ಸಿಲ್ವರ್‌ಲೈನ್‌ ಯೋಜನೆ’ಯನ್ನು ವಿರೋಧಿಸಿ 12 ಸಂಸದರು ಗುರುವಾರ ವಿಜಯ್‌ ಚೌಕ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಆ ವೇಳೆ ದೆಹಲಿ ಪೊಲೀಸರು ಅವರನ್ನು ಅಡ್ಡಗಟ್ಟಿದ್ದಾರೆ. ನಾವು ಸಂಸದರೆಂದು ಹೇಳಿದರೂ ಕೇಳದೆ ನಮ್ಮನ್ನು ತಳ್ಳಿದರು’ ಎಂದು ಅವರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next